ಕೇಂದ್ರ ಸಚಿವ ಸದಾನಂದಗೌಡ ಅಸ್ವಸ್ಥ : ಚಿತ್ರದುರ್ಗದಲ್ಲಿ ಚಿಕಿತ್ಸೆ ನಂತರ ಬೆಂಗಳೂರಿಗೆ ಶಿಪ್ಟ್

Team Newsnap
1 Min Read

ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದಗೌಡ ಅಸ್ವಸ್ಥದರು. ಅವರನ್ನು ಕೂಡಲೇ ಚಿತ್ರದುರ್ಗ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಗಾಗಿ ಬೆಂಗಳೂರಿಗೆ ಶಿಷ್ಟ್ ಮಾಡಲಾಗಿದೆ.

ಬೆಳಿಗ್ಗೆ ತಿಂಡಿ ತಿನ್ನದೇ ಮಾತ್ರೆ ತೆಗೆದು ಕೊಂಡ ಕಾರಣಕ್ಕಾಗಿ ದೇಹದಲ್ಲಿ ಶುಗರ್ ಮಟ್ಟ ಕಡಿಮೆಯಾದ ಹಿನ್ನೆಲೆಯಲ್ಲಿ ಸದಾನಂದಗೌಡರು ಕುಸಿದು ಬಿಟ್ಟರು. ಕೂಡಲೇ ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಚಿತ್ರದುರ್ಗ ಖಾಸಗಿ ಹೋಟೆಲ್‌ಗೆ ಬಂದಾಗ ಈ ಘಟನೆ ನಡೆದಿದೆ. ಬಸವೇಶ್ವರ ಆಸ್ಪತ್ರೆಯ ವೈದ್ಯರು ಸದಾನಂದ ಗೌಡರಿಗೆ ಚಿಕಿತ್ಸೆ ನೀಡಿದರು. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೌಡರು ಇತ್ತೀಚೆಗೆ ಅಷ್ಟೇ ಕೊರೋನಾ ದಿಂದ ಚೇತರಿಸಿಕೊಂಡಿದ್ದರು.

ಸಚಿವ ಸದಾನಂದಗೌಡರ ಕುಟುಂಬ ವೈದ್ಯ ಡಾ. ಶಂಕರ್ ಸಲಹೆ ಮೇರೆಗೆ ಬೆಂಗಳೂರಿನ ಹೆಬ್ಭಾಳದಲ್ಲಿರುವ ಆಸ್ಟಾರ್ ಆಸ್ಪತ್ರೆಗೆ ಕರೆತರಲಾಗುತ್ತಿದೆ.
ಪ್ರಥಮ ಹಂತದ ಚಿಕಿತ್ಸೆ ನಂತರ ಸಚಿವರು ಜ್ಯೂಸ್ ಕುಡಿದು ಮಾತನಾಡಿದರು.

Share This Article
Leave a comment