ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದಂತೆ ಸೆಕ್ಸ್ ಸಿಡಿ ಪ್ರಕರಣ ತನಿಖೆ ಮಾಡುತ್ತಿರುವ ಎಸ್ಐಟಿ ತಂಡ ಮಿಂಚಿನ ಕಾರ್ಯಾಚರಣೆ ಮುಂದುವರೆಸಿದೆ.
ಸಿಡಿ ಕೇಸ್ನ ಕಿಂಗ್ಪಿನ್ ಎನ್ನಲಾದ ಶಿರಾ ತಾಲೂಕು ಭುವನಗಳ್ಳಿ ಗ್ರಾಮದ ನರೇಶ್ಗೌಡ ಎಂಬಾತನ ನಿವಾಸದ ಮೇಲೂ ಎಸ್ಐಟಿ ನಿನ್ನೆ ದಾಳಿ ಮಾಡಿದೆ.
ಈ ದಾಳಿ ಖಂಡಿಸಿ ಇದೀಗ ಪೊಲೀಸರ ವಿರುದ್ಧವೇ ದೂರು ಕೊಡುವುದಾಗಿ ನರೇಶ್ಗೌಡನ ಪತ್ನಿ ಪೂಜಾ ಹೇಳಿದ್ದಾರೆ.
ಭುವನಗಳ್ಳಿಯ ಮನೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪೂಜಾ, ನಿನ್ನೆ ರಾತ್ರಿ 3.45ಕ್ಕೆ ಎಸ್ಐಟಿ ತಂಡ ನನ್ನ ಮನೆಗೆ ಬಂದಿತ್ತು. ಪತಿ ನರೇಶ್ ಎಲ್ಲಿ? ಎಂದು ಕೇಳಿದರು. ನಾನು, ಅವರು ಇಲ್ಲಿಲ್ಲ. 6 ದಿನದಿಂದ ಫೋನ್ ಮಾಡಿಲ್ಲ ಅಂದೆ. ಮನೆಯನ್ನೆಲ್ಲಾ ಸರ್ಚ್ ಮಾಡಿದರು. ನನ್ನ ಮೊಬೈಲ್ ಪರಿಶೀಲನೆ ಮಾಡಿದರು ಎಂದು ವಿವರಿಸಿದರು.
ಮಗಳ ನಾಮಕರಣದ ಫೋಟೋ ವನ್ನೂ ಕೇಳಿದರು. ನಾವು ಆಲ್ಬಂ ಮಾಡಿಸಿರಲಿಲ್ಲ. ಹಾಗಾಗಿ ಕೊಟ್ಟಿಲ್ಲ. ನಾಮಕರಣದ ದಿನ ರಾಜಕಾರಣಿಗಳು ಬಂದಿದ್ದರು. ನನ್ನ ಪತಿ ವರದಿಗಾರ ಆಗಿದ್ದರಿಂದ ಸಹಜವಾಗಿ ಪರಿಚಯದ ರಾಜಕಾರಣಿಗಳು ಬಂದಿದ್ದಾರೆ. ಅದಕ್ಕೇ ಏನೇನೋ ತಪ್ಪು ಕಲ್ಪನೆ ಬೇಡ. ಅಂದು ತುಂಬಾ ಜನ ಅವರ ಸ್ನೇಹಿತರು ಬಂದಿದ್ದರು. ಅವರು ಯಾರ್ಯಾರು ಅಂತಾ ನನಗೆ ಗೊತ್ತಿಲ್ಲ ಎಂದಿದ್ದಾರೆ.
ನನ್ನ ಪತಿ ನರೇಶ್ ಈಗ ಎಲ್ಲಿದ್ದಾರಂತ ನನಗೆ ಗೊತ್ತಿಲ್ಲ. ಅವರ ಮೇಲೆ ಆರೋಪ ಕೇಳಿ ಬಂದಿದೆ. ಈ ಆರೋಪದಿಂದ ಮುಕ್ತರಾಗಿ ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಎಸ್ಐಟಿ ಅಧಿಕಾರಿಗಳ ವಿರುದ್ಧ ದೂರು ನೀಡುತ್ತೇನೆ. ಮಧ್ಯರಾತ್ರಿ ಏಕಾಏಕಿ ಬಂದು ವಿಚಾರಣೆ ಮಾಡಿದ್ದಾರೆ. ನಾವು ಮಹಿಳೆಯರು ಮಾತ್ರ ಇದ್ವಿ. ಅವರ ತಂಡದಲ್ಲಿ ಕನಿಷ್ಠ ಮಹಿಳಾ ಸಿಬ್ಬಂದಿಯೂ ಇರಲಿಲ್ಲ ಎಂದು ಪೂಜಾ ಆರೋಪಿಸಿದರು.
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment