CD ಪ್ರಕರಣ : ಪೋಲಿಸ್ ಆಯುಕ್ತ ಪಂತ್ ಸೇರಿ ಮೂವರು ಅಧಿಕಾರಿಗಳ ವಿರುದ್ಧ ಖಾಸಗಿ ದೂರು

Team Newsnap
0 Min Read

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತ್ ಹಾಗೂ ಇನ್​ಸ್ಪೆಕ್ಟರ್ ಮಾರುತಿ ಖಾಸಗಿ ದೂರು ದಾಖಲಾಗಿದೆ.

ಆದರ್ಶ್ ಆರ್. ಅಯ್ಯರ್ ಎಂಬುವವರು ಈ ಖಾಸಗಿ ದೂರು ನೀಡಿ, ಸಿಡಿ ಪ್ರಕರಣದಲ್ಲಿ ನಿರ್ಭಯ ಅಡಿಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ದೂರು ನೀಡಿದ್ದಾರೆ.

ದಿನೇಶ್ ಕಲ್ಲಹಳ್ಳಿ ದೂರು ಆಧರಿಸಿ ಎಫ್​ಐಆರ್ ದಾಖಲಿಸದ ಹಿನ್ನೆಲೆ ಈ ಖಾಸಗಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. 156(3) ಅಡಿಯಲ್ಲಿ ಈ ಖಾಸಗಿ ದೂರನ್ನು 8 ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆಂಬ ಗೊತ್ತಾಗಿದೆ.‌

Share This Article
Leave a comment