ವಂಚಕ ಯುವರಾಜ್ ನ ಕರ್ಮಕಾಂಡ ಗಳು ಬಗೆದಷ್ಟು ಬರುತ್ತವೆ ಈಗ ನಟಿ ರಾಧಿಕಾ ಮಾತ್ರವಲ್ಲದೆ 8 ಮಂದಿ ನಟಿಯರಿಗೆ ನೋಟಿಸ್ ನೀಡಲು ಸಿಸಿಬಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ನಟಿ ರಾಧಿಕಾ ವಿಚಾರಣೆಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.
ವಂಚಕ ಯುವರಾಜ್ ಸ್ವಾಮಿ ಬಳಿ ಹಣ ಪಡೆದ ನಟಿಯರಿಗೆ ಈಗ ಢವಢವ ಶುರುವಾಗಿದೆ. ಸ್ಟಾರ್ ನಟಿಯರನ್ನೂ ಸಹ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಸಿಸಿಬಿ ಯಾವುದೇ ಕ್ಷಣದಲ್ಲಿ ನೋಟಿಸ್ ನೀಡಲು ತಯಾರಿ ನಡೆಸಿದೆ ಎಂದು ಗೊತ್ತಾಗಿದೆ.
ಮಾಜಿ ಶಾಸಕನಿಗೆ ಯಾಮಾರಿಸಿದ ಸ್ವಾಮಿ :
ಆಡಿಯೋ ಸುದ್ದಿ ಬಹಿರಂಗಗೊಂಡ ಬಳಿಕ ಇದೀಗ ಒಂದೂವರೆ ಕೋಟಿ ರೂಪಾಯಿ ಬೆಲೆ ಬಾಳುವ ಕಾರನ್ನು ಕೇವಲ 75 ಲಕ್ಷ ರೂ.ಗೆ ಯುವರಾಜ್ ಸ್ವಾಮಿ ಖರೀದಿಸಿ ತುಮಕೂರಿನ ಮಾಜಿ ಶಾಸಕ ಸುರೇಶ್ಬಾಬ್ನನ್ನು ಯಾಮಾರಿಸಿರುವುದರ ಬಗ್ಗೆ ಅನುಮಾನ ಹುಟ್ಟಿದೆ.
ಸಿಸಿಬಿ ಜಪ್ತಿ ಮಾಡಿರುವ 2 ಕಾರಲ್ಲಿ ಒಂದು ರಾಜಕಾರಣಿಯದ್ದಾಗಿದೆ. ತುಮಕೂರಿನ ಮಾಜಿ ಶಾಸಕ ಸುರೇಶ್ಬಾಬ್ಗೆ ಸೇರಿದ ಕಾರು
ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿಯ ರೇಂಜ್ ರೋವರ್ ಕಾರನ್ನು 75 ಲಕ್ಷಕ್ಕೆ ಕೊಡಲಾಗಿದೆಯೆ?
ರಾಧಿಕಾ ಗೆ ಸಧ್ಯದಲ್ಲೇ ನೋಟಿಸ ?
ವಂಚಕ ಯುವರಾಜ್ ನಿಂದ 75 ಲಕ್ಷ ರು ಪಡೆದ ನಟಿ ರಾಧಿಕಾ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ. ನಟಿ ರಾಧಿಕಾಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ತೀರ್ಮಾನಿಸಿದ್ದಾರೆ.
ಸಾಕ್ಷ್ಯಾಧಾರವಿದ್ದರೂ ಒತ್ತಡದಿಂದ ಸಿಸಿಬಿ ಪೊಲೀಸರು ಸುಮ್ಮನಿದ್ದರು. ಇದೀಗ ಹಣದ ಬಗ್ಗೆ ಸ್ವತಃ ರಾಧಿಕಾ ಬಾಯ್ಬಿಟ್ಟಿರುವುದರಿಂದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಹಣದ ಮೂಲ, ಯುವರಾಜ್ ಜೊತೆಗಿನ ನಂಟಿನ ಬಗ್ಗೆ ವಿಚಾರಣೆ ನಡೆಸಬಹುದು ಎನ್ನಲಾಗಿದೆ. ಅಲ್ಲದೆ ಹಿರಿಯ ಅಧಿಕಾರಿಗಳ ಜೊತೆ ಸಿಸಿಬಿ ಅಧಿಕಾರಿಗಳು ಈಗಾಗಲೇ ಮಾತುಕತೆಯನ್ನು ಸಹ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಟಿ ರಾಧಿಕಾ ಮಾತ್ರವಲ್ಲದೆ 8 ನಟಿಯರಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆ ನಟಿ ಮಣಿಗಳು ಯಾರು ಎಂಬುದು ಸಧ್ಯದಲ್ಲೇ ಬಹಿರಂಗವಾಗಲಿದೆ.
, ಯಾವುದೇ ಕ್ಷಣದಲ್ಲಿ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ಯುವರಾಜ್ ಸ್ವಾಮಿ ಬಳಿ ಹಣ ಪಡೆದ ನಟಿಯರಿಗೆ ಈಗ ಢವಢವ ಶುರುವಾಗಿದೆ. ಸ್ಟಾರ್ ನಟಿಯರನ್ನು ಸಹ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment