February 21, 2026

Newsnap Kannada

The World at your finger tips!

cd1b07c7 779a 4744 bebc e677096a34a0

ಕಾರಿನ ಟೈರ್ ಸ್ಫೋಟಗೊಂಡು ಪತಿ ಸಾವು: ಪತ್ನಿಗೆ ಗಂಭೀರ ಗಾಯ- ಮಕ್ಕಳಿಬ್ಬರು ಪಾರು

Spread the love

ಬೆಂಗಳೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದಾಗ ಕಾರಿನ ಟೈರ್ ಸ್ಪೋಟಗೊಂಡ ಪರಿಣಾಮ‌ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಹಾಸನ ಸಮೀಪ ಶನಿವಾರ ನಡೆದಿದೆ.

ಕುಂದಾಪುರದ ಉಳ್ತೂರಿನ ಪ್ರಕಾಶ್ ಶೆಟ್ಟಿ ಮೃತಪಟ್ಟವರು.

ಪ್ರಕಾಶ್ ಶೆಟ್ಟಿ ಬೆಂಗಳೂರಿನಿಂದ ಪತ್ನಿ ಜೊತೆ ಕಾರಿನಲ್ಲಿ ಬರುತ್ತಿರುವಾಗ ಹಾಸನದ ಬಳಿ ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ. ಶೆಟ್ಟಿ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿ ದ್ದಾರೆ.ಮಕ್ಕಳಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಕುಂದಾಪುರದಲ್ಲಿ ನಡೆಯಲಿರುವ ಸೊಸೆಯ ಮದುವೆ ಸಮಾರಂಭಕ್ಕೆ ಕುಟುಂಬದ ಜೊತೆ ಬರುವಾಗ ಈ ಘಟನೆ ನಡೆದಿದೆ.

ಹಾಸನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!