2021 ರ ಫೆ 19 ರಿಂದ ಮಾ. 2 ತನಕ ನಡೆಯಲಿರುವ ಹೂವಿನ ಹಡಗಲಿ ತಾಲೂಕಿನ ಮೈಲಾರ ಜಾತ್ರೆಯನ್ನು ರದ್ದು ಮಾಡಿ ಜಿಲ್ಲಾಡಳಿತ ಇಂದು ಆದೇಶ ಹೊರಡಿಸಿದೆ.
ಮೈಲಾರ ಗ್ರಾಮದ ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಯನ್ನು ವೀಕ್ಷಿಸಲು ರಾಜ್ಯದ ಹಲವು ಭಾಗದಿಂದ ಭಕ್ತರು ಬರುತ್ತಾರೆ.
ಈ ಜಾತ್ರೆಯಲ್ಲಿ ಸುಮಾರು 15 ಅಡಿ ಮರದ ಬಿಲ್ಲನ್ನು ಏರಿ ಕಾರ್ಣಿಕ ನುಡಿಯುವ ಗೊರವಯ್ಯನನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಭವಿಷ್ಯ ಆಲಿಸುತ್ತಿದ್ದರು.
ಮಾರ್ಚ್ 1 ರಂದು ಕಾರ್ಣಿಕೋತ್ಸವ ನಡೆಯಬೇಕಿತ್ತು. ಆದರೆ ಕೊರೊನಾ ಸೋಂಕಿನ ಹಿನ್ನೆಲೆ ಫೆ.19 ರಿಂದ ಮಾ 2 ರವರೆಗೂ ನಡೆಯಬೇಕಿದ್ದ ಜಾತ್ರಾ ಮಹೋತ್ಸ ರದ್ದು ಮಾಡಲಾಗಿದೆ.