Editorial

ಬದುಕೆಂಬ ಯುದ್ದ ಭೂಮಿಯ ಸಂಘರ್ಷದಲ್ಲಿ ಹುಟ್ಟುವ ಅನುಭಾವ

ದೈವತ್ವ ( ಒಳ್ಳೆಯತನ ) ಮತ್ತು ರಾಕ್ಷಸತ್ವದ ( ಕೆಟ್ಟತನ ) ಸಂಘರ್ಷದಲ್ಲಿ ಹುಟ್ಟುವ ಅಮೃತತ್ವ ( ಅರಿವು ) ಎಂಬ ಅನುಭಾವ….

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾ ಒಲಿದೆ…
ಅಕ್ಕಮಹಾದೇವಿ,

ಆಸೆಯೇ ದುಃಖಕ್ಕೆ ಮೂಲ….
ಗೌತಮ ಬುದ್ಧ,

ಕಾಯಕವೇ ಕೈಲಾಸ….
ಬಸವಣ್ಣ,

ಸತ್ಯಮೇವ ಜಯತೇ….
ಮಹಾತ್ಮ ಗಾಂಧಿ,

ನಿನಗೆ ಮರ್ಯಾದೆ ಇಲ್ಲದ ಜಾಗದಲ್ಲಿ ನಿನ್ನ ಚಪ್ಪಲಿಯನ್ನು ಸಹ ಬಿಡಬೇಡ….
ಬಾಬಾ ಸಾಹೇಬ್ ಅಂಬೇಡ್ಕರ್,

ಇಲ್ಲಿ ಯಾವುದನ್ನು ಸೃಷ್ಡಿಸಲು ಸಾಧ್ಯವಿಲ್ಲ, ಮತ್ತು ನಾಶ ಪಡಿಸಲು ಸಾಧ್ಯವಿಲ್ಲ, ಎಲ್ಲವೂ ರೂಪಾಂತರ….
ವೇದವ್ಯಾಸರು,

ಹೀಗೆ ಇನ್ನೂ ಅನೇಕ ದಾರ್ಶನಿಕರು ತಾವು ಕಂಡ ಅನುಭವದ ಸತ್ಯಗಳನ್ನು ಅನುಭಾವಿಸಿ ಹೇಳಿದ್ದಾರೆ…..

ಇವು ಸಾರ್ವಕಾಲಿಕ ಹೇಳಿಕೆಗಳಾಗಲು ಅವರು ಅನುಭವಿಸಿದ ಬದುಕು ತುಂಬಾ ಕಾಠಿಣ್ಯದಿಂದ, ಗೊಂದಲದಿಂದ, ನೋವಿನಿಂದ, ನಿರಾಸೆಯಿಂದ, ಹತಾಶೆಯಿಂದ, ಪುಟಿದೇಳುವ ಜೀವನೋತ್ಸಾಹದಿಂದ, ಅಪಾರ ತಾಳ್ಮೆಯಿಂದ ಕೂಡಿರುತ್ತದೆ. ಎಷ್ಟೋ ಬಾರಿ ಸಾವಿನ ದವಡೆಯಿಂದ, ಅವಮಾನದ ಅಂಚಿನಿಂದ ನುಸುಳಿ ಬಂದಿರುತ್ತಾರೆ. ಉತ್ತರವಿಲ್ಲದ, ಪರಿಹರಿಸಲಾಗದ ಸಂಘರ್ಷಗಳು ಅವರನ್ನು ಕಾಡಿರುತ್ತವೆ.

ಅವರಲ್ಲಿ ಮೂಡಿದ ದೈವತ್ವದ ಗುಣಲಕ್ಷಣಗಳಿಗೆ ಕಾರಣ ಅವರು ಹೋರಾಡಿರುವುದು ಸಮಾಜ ಮತ್ತು ತಮ್ಮೊಳಗಿ ರಾಕ್ಷಸತ್ವದ ವಿರುದ್ಧ. ಹಾಗಿದ್ದಾಗ ಮಾತ್ರವೇ ಈ ಚಿಂತನೆಗಳು ಮೂಡಲು ಸಾಧ್ಯ. ಸಹಜ ಪರಿಸ್ಥಿತಿಯಲ್ಲಿ ಅಥವಾ ಸಣ್ಣ ಪುಟ್ಟ ಕಷ್ಟಗಳಿಗೆ ಈ ರೀತಿಯ ಶಕ್ತಿ ಇರುವುದಿಲ್ಲ.

ಉದಾಹರಣೆಗೆ ಅಕ್ಕಮಹಾದೇವಿಯವರ ಉದಾಹರಣೆಯನ್ನೇ ತೆಗೆದುಕೊಳ್ಳಿ,

ಸಾವು ಇರದ, ಕೇಡು ಬಯಸದ, ರೂಪವಿರದ ಚೆಲುವ ನನ್ನ ಗಂಡನಾಗಬೇಕು ಎನ್ನುತ್ತಾರೆ.
ಈ ವಾಕ್ಯಗಳನ್ನು ಗಮನಿಸಿದಾಗ ನನಗೆ ” ಕ್ಷಣಿಕ ಬದುಕಿನ ಮನುಷ್ಯ ಜೀವವನ್ನು ಪ್ರೀತಿಸುವುದು ವ್ಯರ್ಥ, ಎಷ್ಟೇ ಆದರೂ ಅದು ಆಳಿಯುತ್ತದೆ, ಅದರಿಂದ ವಿರಹದ ವೇದನೆ ಏಕೆ ” ಎಂಬ ಭಯದಿಂದ ಅಥವಾ ಅರಿವಿನಿಂದ ಮೂಡಿದ ಸ್ಥಿತ ಪ್ರಜ್ಞೆತೆ ಇರಬೇಕು,
ಅಥವಾ,
ಅಕ್ಕಮಹಾದೇವಿ ಪುರುಷ ಸಮಾಜದಿಂದ ಬಹಳ ನಿರೀಕ್ಷಿಸಿ ಅಪಾರ ಶೋಷಣೆಗೆ ಒಳಗಾಗಿ ತೀವ್ರ ನಿರಾಸೆಗೆ ಒಳಗಾಗಿರಬೇಕು. ಇವರ ಸಹವಾಸವೇ ಬೇಡ ” ಎಂಬ ಅರ್ಥದಲ್ಲೂ ಹೇಳಿರಬಹುದು.
ಅಥವಾ
ಆ ರೀತಿಯ ಇನ್ನೇನಾದರು ಘಟನೆ ಆಕೆಯ ಜೀವನದಲ್ಲಿ ಅಥವಾ ಮನಸ್ಸಿನಲ್ಲಿ ಗಾಢ ಪರಿಣಾಮ ಬೀರಿರಬೇಕು.

ಗೌತಮ ಬುದ್ಧ ಎಲ್ಲ ರೀತಿಯ ಆಸೆಗಳು ದುರಾಸೆಗಳಾಗಿ ಬದುಕನ್ನು ಸರ್ವನಾಶದ ದಿಕ್ಕಿಗೆ, ಅಪಾರ ನೋವಿಗೆ ದೂಡುವುದನ್ನು ಬಹುಶಃ ಅನುಭವಿಸಿಯೇ ಹೇಳಿರಬೇಕು. ಆತ ದೇಹ ಮನಸ್ಸುಗಳನ್ನು ಅಪಾರವಾಗಿ ದಂಡಿಸಿ, ಧ್ಯಾನಿಸಿ, ಚಿಂತಿಸಿ ಈ ತೀರ್ಮಾನಕ್ಕೆ ಬಂದಿರಬೇಕು.

ಮಹಾವೀರರು ಪ್ರತಿಪಾದಿಸಿದ ಅಹಿಂಸೆಯ ಮಹತ್ವದ ಹೇಳಕೆಗೆ ಅವರು ಆ ಕಾಲದಲ್ಲೇ ಎಷ್ಟು ಹಿಂಸೆಯನ್ನು ನೋಡಿದ್ದಾರೋ ಏನೋ,

ಗಾಂಧಿಯವರ ಸತ್ಯದೊಂದಿಗಿನ ಪ್ರಯೋಗದಲ್ಲಿ ಅದೆಷ್ಟು ಸುಳ್ಳುಗಾರರು ಅವರನ್ನು ವಂಚಿಸಿರುವ ನೋವು ಕಾಡಿದೆಯೋ,

ಅಂಬೇಡ್ಕರ್ ಅವರ ಚಪ್ಪಲಿಯ ಹೇಳಿಕೆ,ಅವರು ಅನುಭವಿಸಿದ ಸಾಮಾಜಿಕ ಅವಮಾನದ ಅತ್ಯಂತ ಆಳ ನೋವಿನ ಪ್ರತಿಬಿಂಬವೇ ಆಗಿರಬೇಕು. ಇಲ್ಲದಿದ್ದರೆ ಆ ಮಾತುಗಳು ಅವರಿಂದ ದಾಖಲಾಗುತ್ತಿರಲಿಲ್ಲ.

ಕಾಯಕದ ಮಹತ್ವ, ಸಮಾನತೆಯ ಆಶಯ ಸಾರಿದ ಬಸವಣ್ಣ ಎಷ್ಟು ಮತ್ತು ಏನೇನು ಸಂಕಟಗಳನ್ನು ಅನುಭವಿಸಿದರೋ, ಅದು ಅವರಲ್ಲಿ ಎಷ್ಟು ಆಳದ ಗಾಯವನ್ನು ಉಂಟುಮಾಡಿದೆಯೋ,
ಹೀಗೆ,ಎಲ್ಲರೂ ತುಂಬಾ ಆಳವಾದ ಜೀವನಾನುಭವದಲ್ಲಿ ಬೆಂದಿರಬೇಕು ಮತ್ತು ನೊಂದಿರಬೇಕು.

ಈ ಎಲ್ಲವೂ ಅವರ ಬದುಕಿನ ಘರ್ಷದಿಂದ ಉಂಟಾದ ಚಿಂತನೆಯಲ್ಲಿ ಮೂಡಿದ ಅಮೃತಗಳೇ. ಬರಹಗಾರರು ಬಹಳಷ್ಟು ವಿಭಿನ್ನತೆಯಿಂದ ಅತ್ಯುತ್ತಮ ವಾಕ್ಯಗಳನ್ನು ಬರೆಯಬಹುದು. ಆದರೆ ‌ಸಾರ್ವಕಾಲಿಕ ಸತ್ಯಗಳನ್ನು ಬರೆಯಲು ತುಂಬಾ ತುಂಬಾ ಆಳದ ಅನುಭವ ಬೇಕಾಗುತ್ತದೆ. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಬದುಕೊಂದು ಯುದ್ದ ಭೂಮಿ,
ಅದೊಂದು ಪ್ರಯೋಗ ಶಾಲೆ,
ಕೆಲವರಿಗೆ ಸಹಜವಾಗಿ, ಮತ್ತೆ ಕೆಲವರಿಗೆ ಅಸಹಜವಾಗಿ ಜೀವನದ ಘಟನೆಗಳು ಸಂಭವಿಸುತ್ತಿರುತ್ತದೆ. ಅದಕ್ಕೆ ಪ್ರತಿಕ್ರಿಯಿಸುವ ರೀತಿಯೇ ನಮ್ಮೊಳಗಿನ ಸಾಮರ್ಥ್ಯವನ್ನು ಹೊರಹಾಕುತ್ತದೆ. ಆ ಹೊರ ಹಾಕುವಿಕೆಯೇ ಮಹಾತ್ಮರನ್ನು ಅಥವಾ ದೈವಿಕ ಶಕ್ತಿಯ ವ್ಯಕ್ತಿಗಳನ್ನು ಸೃಷ್ಟಿಸುತ್ತದೆ.

ಆದ್ದರಿಂದ ನೀವು ಅನುಭವಿಸುವ ಕಷ್ಟಗಳು, ರಾಕ್ಷಸತ್ವದ ವಿರುದ್ಧ ಹೋರಾಟ ಕೆಲವೊಮ್ಮೆ ನಿಮ್ಮನ್ನು ದೈವತ್ವಕ್ಕೆ ಮುನ್ನಡೆಸಬಹುದು. ಆ ಹೋರಾಟ ಸಾಕಷ್ಟು ದೀರ್ಘಕಾಲ ಉಳಿಯಬಹುದು. ಧೃತಿಗೆಡದೆ ಅವುಗಳನ್ನು ಎದುರಿಸಿ ಜೀವದ ಕೊನೆಯ ಉಸಿರಿರುವವರೆಗೂ,
ಏನೇ ಏರಿಳಿತಗಳು ಬರಲಿ ಮುನ್ನುಗ್ಗಿ,
ನಿಮಗೂ ಸಹ ದೈವತ್ವದ ಎತ್ತರಕ್ಕೆ ಏರುವ ಎಲ್ಲಾ ಸಾಧ್ಯತೆಗಳೂ ಇವೆ.

  • ವಿವೇಕಾನಂದ. ಹೆಚ್.ಕೆ.
Team Newsnap
Leave a Comment
Share
Published by
Team Newsnap

Recent Posts

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024