20 ಸಾವಿರ ರು ಲಂಚ ಸ್ವೀಕಾರ:ಬೋಗಾದಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ACB ಬಲೆಗೆ

ಮೈಸೂರು ತಾಲೂಕು ಬೋಗಾದಿ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಯೊಬ್ಬರು 20 ಸಾವಿರ ರು ಲಂಚ ಸ್ವೀಕಾರ ಮಾಡುವ ವೇಳೆ ACB ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಡಿ ಎನ್ ವಿಜಯ್ ಕುಮಾರ್ ಎಂಬ ಅಧಿಕಾರಿಯೇ ಲಂಚ ಸ್ವೀಕಾರ ಮಾಡಿದವರು. ಪಟ್ಟಣ ಪಂಚಾಯ್ತಿ ವ್ಯಾಲುವೇಟರ್ ಎಂಜನೀಯರ್ ಒಬ್ಬರ ಲೈಸನ್ಸ್ ನವೀಕರಣಕ್ಕಾಗಿ 20 ಸಾವಿರ ರು ಬೇಡಿಕೆ ಇಟ್ಟಿದ್ದರು ವಿಜಯಕುಮಾರ್. ಈ ಅಧಿಕಾರಿ ಲಂಚ ನೀಡುವ ವಿಷಯವನ್ನು ಎಂಜನಿಯರ್ ACB ಅಧಿಕಾರಿಗಳಿಗೆ ತಿಳಿಸಿದ ನಂತರ ಅಧಿಕಾರಿಗಳು ಮುಖ್ಯಾಧಿಕಾರಿಯನ್ನು ಬಲೆಗೆ ಹಾಕಿಕೊಂಡಿದ್ದಾರೆ.