Main News

ನಮಗೂ ಮಂಡ್ಯಕ್ಕೂ ಜನ್ಮ ಜನ್ಮದ ಅನುಬಂಧ – ಎಚ್ ಡಿ ಕುಮಾರಸ್ವಾಮಿ

ಮಂಡ್ಯ ಜಿಲ್ಲೆಗೂ ನಮಗೂ ಯಾವುದೋ ಜನುಮ ಜನುಮದ ಅನುಬಂಧ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶುಕ್ರವಾರ ಹೇಳಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ನಿಖಿಲ್ ಚುನಾವಣೆಯಲ್ಲಿ ಮಂಡ್ಯ ಜನ ಮೋಸ ಮಾಡಲಿಲ್ಲ. ಬದಲಿಗೆ ಕಾಂಗ್ರೆಸ್, ಬಿಜೆಪಿ, ರೈತಸಂಘ ಎಲ್ಲರೂ ಸೇರಿ ನಮ್ಮನ್ನು ಮುಗಿಸುವ ಪ್ಲಾನ್ ಮಾಡಿ ಸೋಲಿಸಿದರು ಎಂದರು.

ಮಂಡ್ಯ ಜನ ನನ್ನ ಹೃದಯದಲ್ಲಿದ್ದಾರೆ.ನನ್ನ ದೇಹ ಮಣ್ಣುಸೇರೋವರೆಗೂ ಈ ಜಿಲ್ಲೆಯ ಕಷ್ಟಕ್ಕೆ ನೆರವಾಗುತ್ತೇನೆ.ನಿಖಿಲ್ ಈಗ ಸೋತಿರಬಹುದು, ಮುಂದೆ ಮಂಡ್ಯ ಜನರೇ ಒಪ್ಪಿ ಲೋಕಸಭೆಗೆ ಹೋಗಬಹುದು ಎಂದು ವಿಶ್ವಾಸದಿಂದ ಹೇಳಿದರು.

ಎನ್ ಕಿತ್ತು ಗುಡ್ಡೆ ಹಾಕಿದ್ದಾನೆ?

ಸಚಿವ ನಾರಾಯಣಗೌಡ ಕಾರ್ಯವೈಖರಿಗೂ ಎಚ್ಡಿಕೆ ಆಕ್ಷೇಪ ವ್ಯಕ್ತಪಡಿಸಿ ಈತ ಸಚಿವನಾಗಿ ಏನ್ ಕಿತ್ತು ಗುಡ್ಡೆಹಾಕಿದ್ದಾನೆ ಎಂದು ಪ್ರಶ್ನೆ ಮಾಡಿದರು.

ನಾನು ಸಿಎಂ ಆಗಿದ್ದಾಗ ಹಣ ಬಿಡುಗಡೆ ಮಾಡಿ ಕೆಲಸ ಆರಂಭ ಮಾಡಿದ್ದೆವು.
ನನ್ನ ಮತ್ತು ನಮ್ಮ‌ಕುಟುಂಬದ ಬಗ್ಗೆ ಮಾತಾಡೋವ ಹಂತಕ್ಕೆ ಆತ ಬಂದಿದ್ದಾನೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಹೇಳಿದಿಷ್ಟು.

  • ಗ್ರಾಮ ಪಂಚಾಯತಿ ಚುನಾವಣೆ ಯಿಂದ ಪಕ್ಷದ ಬಲವನ್ನು ತಿಳಿಯೋಕೆ ಆಗಲ್ಲ. ಗ್ರಾಮ‌ ಪಂಚಾಯತಿ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯಲ್ಲ. ತಾ.ಪಂ ಜಿ.ಪಂ ಚುನಾವಣೆಗಳು‌ ಚಿಹ್ನೆ ಮೇಲೆ ನಡೆಯೋದು ಆ ಚುನಾವಣೆಯಲ್ಲಿ ಪಕ್ಷದ ಬಲ ತಿಳಿಯುತ್ತದೆ.
  • ಬಸವಕಲ್ಯಾಣ, ಮಸ್ಕಿ ಚುನಾವಣೆಯಲ್ಲಿ ಅಭ್ಯರ್ಥಿ ಹಾಕಲು ಆಸಕ್ತಿ ಇಲ್ಲ. ಅಲ್ಲಿನ ಕಾರ್ಯಕರ್ತರು ಅಭ್ಯರ್ಥಿ ಹಾಕಬೇಕು ಎನ್ನುತ್ತಿದ್ದಾರೆ ತೀರ್ಮಾನ ಮಾಡಿ ಅಭ್ಯರ್ಥಿ ಹಾಕೋ ಬಗ್ಗೆ ಸಭೆ ಮಾಡುತ್ತೇವೆ.
  • ಬಸವಕಲ್ಯಾಣದಲ್ಲಿ ನಾವು ಮೂರು ಬಾರಿ ಗೆದ್ದಿದ್ದೇವೆ. ಅಲ್ಲಿ ನಮ್ಮದೇ ಆದ ಅಸ್ತಿತ್ವ ಇದೆ , ಸಭೆ ನಡೆಸಿ ಅಭ್ಯರ್ಥಿ ಹಾಕೋದರ ಬಗ್ಗೆ ತೀರ್ಮಾನ ಮಾಡುತ್ತೇವೆ.
  • ಸಿದ್ದರಾಮಯ್ಯ ಹೇಳ್ತಾರೆ ಜೆಡಿಎಸ್ ನಂಬಿ ಹಾಳಾದೆವು ಎಂದು ಮಂಡ್ಯದಲ್ಲಿ ಯಾರ ನಂಬಿ ಹಾಳಾದೆವು ಅನ್ನೋದು ನಮಗೆ ಗೊತ್ತು
  • ಕಾಂಗ್ರೆಸ್ ನವರು ಬಿಜೆಪಿ ಜೊತೆ ಎಷ್ಟೋ ಸ್ಥಳೀಯ ಸಂಸ್ಥೆಗಳಲ್ಲಿ‌ ಒಂದಾಗಿದ್ದಾರೆ. ಯಾರು ಸ್ವಚ್ಚವಾಗಿ ರಾಜಕಾರಣ ಮಾಡುತ್ತಿಲ್ಲ.
  • ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಗ್ರಾಮ ಸ್ವರಾಜ್ಯ ಹೆಸರಿನಲ್ಲಿ ಮೂರು ನಾಲ್ಕು ಮಂದಿ ಸಚಿವರು‌ ಎಲ್ಲಾ ತಾಲೂಕಿಗೆ ಹೋಗುತ್ತಿದ್ದಾರೆ. ಬಿಜೆಪಿ ಮಂತ್ರಿಗಳು ಗ್ರಾಪಂ ಚುನಾವಣೆ ಹಿನ್ನೆಲೆ ಹಳ್ಳಿಗೆ ಹೋಗ್ತಾ ಇದ್ದಾರೆ. ತಮ್ಮ‌ ಪಕ್ಷವನ್ನು ಕಟ್ಟಲು ಈ ಕಾರ್ಯಕ್ರಮ ಮಾಡ್ತಾ ಇದ್ದಾರೆ.
  • ಪಕ್ಷದ ಸಂಘಟನೆಯ ಜೊತೆಗೆ ನಾಲ್ಕು ಗ್ರಾಮಗಳಿಗೆ ಭೇಟಿ ನೀಡಬೇಕು. ರೈತರ ಸಮಸ್ಯೆಯನ್ನು ಆಲಿಸಬೇಕು. ಕೇವಲ ಪಕ್ಷ ಸಂಘಟನೆಯನ್ನು ಮಾತ್ರ ಮಾಡಬಾರದು .ಮಳೆ ಅವಾಂತರವಾದಾಗ ಮಂತ್ರಿಗಳು ಗ್ರಾಮಗಳಿಗೆ ಭೇಟಿ ನೀಡಲಿಲ್ಲ.
Team Newsnap
Leave a Comment
Share
Published by
Team Newsnap

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024