ಬಿಹಾರ ರಾಜ್ಯದ 243 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟದ ಮಧ್ಯೆ ಬಿರುಸಿನ ಪೈಪೋಟಿ ನಡೆದಿದೆ.
ಮತ ಎಣಿಕೆಯ ಆರಂಭದಿಂದಲೂ ಹೆಚ್ಚೂಕಡಿಮೆ ಸಮಾನವಾಗಿ ಮುನ್ನಡೆ ಸ್ಥಿತಿ ಹೊಂದಿವೆ. ಈವರೆಗೆ 243 ಕ್ಷೇತ್ರಗಳ ಪೈಕಿ 242 ಕ್ಷೇತ್ರಗಳಲ್ಲಿ ಮತ ಎಣಿಕೆ ಮಾಹಿತಿ ಬಂದಿದ್ದು, ಎನ್ಡಿಎ ಮೈತ್ರಿಕೂಟ 121 ಕಡೆ ಮುನ್ನಡೆ ಹೊಂದಿದರೆ, ಮಹಾಘಟಬಂಧನ್ 112 ಕಡೆ ಮುನ್ನಡೆ ಪಡೆದಿದೆ. ಮಧ್ಯಾಹ್ನದಷ್ಟರಲ್ಲಿ ಬಹುತೇಕ ಫಲಿತಾಂಶ ಹೊರಬೀಳಲಿದೆ.
ಎನ್ಡಿಎ ಮೈತ್ರಿಕೂಟದಲ್ಲಿ ಜೆಡಿಯುಗಿಂತ ತುಸು ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಮಹಾಘಟಬಂಧನದಲ್ಲಿ ನಿರೀಕ್ಷೆಯಂತೆ ಆರ್ಜೆಡಿ ಭರ್ಜರಿ ಮುನ್ನಡೆ ಗಳಿಸಿದೆ. ಎಡಪಕ್ಷಗಳೂ ಕೂಡ ತಮ್ಮ ಅಸ್ತಿತ್ವವನ್ನು ಜೋರಾಗಿಯೇ ತೋರಿಸುತ್ತಿವೆ. ಒಟ್ಟಾರೆ ಪಕ್ಷಾವಾರು ಲೆಕ್ಕ ತೆಗೆದುಕೊಂಡಾಗ ಆರ್ಜೆಡಿ ಮೊದಲ ಸ್ಥಾನದಲ್ಲಿದೆ. ಬಿಜೆಪಿ ಮತ್ತು ಜೆಡಿಯು ನಂತರದ ಸ್ಥಾನಗಳಲ್ಲಿವೆ.
ಇದೇ ವೇಳೆ, ಹಲವಾರು ಕಾರಣಕ್ಕೆ ಬಿಹಾರ ಚುನಾವಣೆ ರಾಷ್ಟ್ರವ್ಯಾಪಿ ಕುತೂಹಲ ಮೂಡಿಸಿದೆ. ಎನ್ಡಿಎ ಮತ್ತು ಮಹಾಘಟಬಂಧನ (ಎಂಟಿಬಿ) ಇಲ್ಲಿ ಪ್ರಮುಖ ಮೈತ್ರಿಕೂಟಗಳಾಗಿವೆ. ಹಾಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ವಿರುದ್ಧ ತೇಜಸ್ವಿ ಯಾದವ್ ನೇತೃತ್ವದ ಎಂಟಿಬಿ ತೀವ್ರ ಸ್ಪರ್ಧೆಯೊಡ್ಡಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಮಹಾಘಟಬಂಧನದ ಗೆಲುವನ್ನು ಸೂಚಿಸಿವೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಅಕ್ಟೋಬರ್ 28, ನವೆಂಬರ್ 3 ಹಾಗೂ ನವೆಂಬರ್ 7ರಂದು ಮತದಾನ ನಡೆದಿತ್ತು. ಒಟ್ಟಾರೆ ಶೇ 57ರಷ್ಟು ಮತದಾನವಾಗಿತ್ತು. 3,755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುತ್ತಿದೆ.
ಹಿನ್ನಡೆಯಲ್ಲಿರುವ ಪ್ರಮುಖರು: ಪಪ್ಪು ಯಾದವ್, ಲವ್ ಸಿನ್ಹಾ(ಕಾಂಗ್ರೆಸ್), ಚಂದ್ರಿಕಾ ರಾಯ್ (ಜೆಡಿಯು), ಪ್ರವೀಣ್ ಸಿಂಗ್ (ಕಾಂಗ್ರೆಸ್), ಸಂತೋಷ್ ಕುಮಾರ್, ಲಲನ್ ಕುಮಾರ್(ಕಾಂಗ್ರೆಸ್), ಸುಭಾಷಿಣಿ ಯಾದವ್, ಮಸ್ಕೂರ್ ಉಸ್ಮಾನಿ (ಕಾಂಗ್ರೆಸ್)
ಮುನ್ನಡೆಯಲ್ಲಿರುವ ಪ್ರಮುಖರು: ಶ್ರೇಯಸಿ ಸಿಂಗ್(ಬಿಜೆಪಿ), ಅನಂತ್ ಸಿಂಗ್(ಆರ್ಜೆಡಿ), ಎನ್.ಕೆ. ಯಾದವ್ (ಬಿಜೆಪಿ)
ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More
ಐದು ದಿನಗಳ ಜೈಲು ವಾಸಕ್ಕೆ ಅಂತ್ಯ 5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More
ಬೆಂಗಳೂರು : ಪ್ರಜ್ವಲ್ ರೇವಣ್ಣ ವಿಚಾರದ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್ನಲ್ಲಿ ಸಂತ್ರಸ್ತೆ… Read More
ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More
ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More
ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More
This website uses cookies.
Leave a Comment