Karnataka

ಕರುನಾಡ ಜಿಲ್ಲೆಗಳ ಕಿರು ಪರಿಚಯ – 1 – ಬೀದರ್ ಜಿಲ್ಲೆ

ಕಲಾವತಿ ಪ್ರಕಾಶ್

ಜಾನಪದ ಶೈಲಿಯಲ್ಲಿ ಕವನ :

ಕರ್ನಾಟಕದ ಕಿರೀಟವೆಂದೇ
ಖ್ಯಾತಿ ಪಡೆದಿಹ ಜಿಲ್ಲೆಯಿದು
ಬಹಮನಿ ಸುಲ್ತಾನ್ರು ಕಟ್ಟಿದ
ರಾಜಧಾನಿಯ ನಗರ ಇದು

ಸ್ವಾತಂತ್ರ್ಯ ನಂತರ ಬೀದರ್ ಭೂಮಿಯು
ಮೈಸೂರು ರಾಜ್ಯಕೆ ಸೇರಿಹುದು
ಏಕೀಕರಣದ ಸಮಯದಿ ಇದು
ಬೀದರ್ ಜಿಲ್ಲೆಯು ಆಗಿಹುದು

“ಬಿದ್ರಿ” ಎಂಬ ಕರಕುಶಲತೆಗೆ
ವಿಶೇಷ ಪ್ರಸಿದ್ಧಿ ಪಡೆದಿಹುದು
ಸೂರ್ಯಕಿರಣ ವೈಮಾನಿಕ ತಂಡದ
ತರಬೇತಿ ಕೇಂದ್ರವು ಇಲ್ಲಿಹುದು

ಕರ್ನಾಟಕದ ಸ್ವಚ್ಛ ನಗರದೊಳು
ಐದನೆ ಸ್ಥಾನ ಪಡೆದಿಹುದು
ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ಖರಲಿ
ಸೌಹಾರ್ದತೆಯನು ಮೆರೆದಿಹುದು

ಬಸವ ಕಲ್ಯಾಣದಿ ಬಸವಣ್ಣ ನೆಲೆಸಿದ
ಪುಣ್ಯ ಭೂಮಿಯು ಈ ನಾಡು
ಶರಣ ಸಾಹಿತ್ಯದ ಅನುಭವ
ಮಂಟಪದೂರೇ ಈ ಬೀಡು

ಶರಣ ಶರಣೆಯರು ತಮ್ಮಅನಿಸಿಕೆಗಳ
ವಚನದ ಮೂಲಕ ಸಾರಿದರು
ಸಮಾಜದಲ್ಲಿನ ಮೇಲು ಕೀಳಿನಲಿ
ಬದಲಾವಣೆಯನು ತಂದಿಹರು

ಹೊಸತನ ಹೊಸ ಬರಹದ
ವಚನ ಸಾಹಿತ್ಯವ ಬಿತ್ತಿದರು
ಶೈವ ಸಂಸ್ಕೃತಿ ಸಾರುತ ವಿಶ್ವದಿ
ರಾಜ್ಯಕ್ಕೆ ಹೆಮ್ಮೆಯ ತಂದುಕೊಟ್ಟರು

ಕನ್ನಡ ಕಟ್ಟುವ ಸಾಹಿತ್ಯ ರಚಿಸುವ
ಸಾಹಿತಿಗಳೂ ಇಲ್ಲಿಹರು
ವೀರೇಂದ್ರ ಸಿಂಪಿ ದೇಶಾಂಶ ಹುಡುಗಿ
ವಿಸಾಜಿ ಯಂಥ ಮುಂತಾದವರು

ಶಿಕ್ಷಣ ಕ್ಷೇತ್ರ, ದಲಿತೋದ್ಧಾರ, ಕನ್ನಡಕ್ಕೆ
ಅಪಾರ ಸೇವೆಯನು ಸಲ್ಲಿಸಿದವರು
ಭಾಲ್ಕಿ ಪಟ್ಟಣದ ಶತಾಯುಷಿ
ಶ್ರೀ ಚನ್ನಬಸವ ಪಟ್ಟದ ದೇವರು

Team Newsnap
Leave a Comment
Share
Published by
Team Newsnap

Recent Posts

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024

ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡನ್ನು ತಯಾರಿಸಲಾಗುತ್ತಿತ್ತು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More

September 19, 2024

ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್‌ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಾಗಿದೆ. ಶಾಸಕ… Read More

September 19, 2024

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿ

ಬೆಂಗಳೂರು: ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More

September 18, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,640 ರೂಪಾಯಿ ದಾಖಲಾಗಿದೆ. 24… Read More

September 18, 2024

ಸೆ.19ರಿಂದ ವಿಎಓ/ಜಿಟಿಟಿಸಿ ಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು: ಸೆ.19ರಿಂದ ಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ… Read More

September 17, 2024