ಜಾನಪದ ಶೈಲಿಯಲ್ಲಿ ಕವನ :
ಕರ್ನಾಟಕದ ಕಿರೀಟವೆಂದೇ
ಖ್ಯಾತಿ ಪಡೆದಿಹ ಜಿಲ್ಲೆಯಿದು
ಬಹಮನಿ ಸುಲ್ತಾನ್ರು ಕಟ್ಟಿದ
ರಾಜಧಾನಿಯ ನಗರ ಇದು
ಸ್ವಾತಂತ್ರ್ಯ ನಂತರ ಬೀದರ್ ಭೂಮಿಯು
ಮೈಸೂರು ರಾಜ್ಯಕೆ ಸೇರಿಹುದು
ಏಕೀಕರಣದ ಸಮಯದಿ ಇದು
ಬೀದರ್ ಜಿಲ್ಲೆಯು ಆಗಿಹುದು
“ಬಿದ್ರಿ” ಎಂಬ ಕರಕುಶಲತೆಗೆ
ವಿಶೇಷ ಪ್ರಸಿದ್ಧಿ ಪಡೆದಿಹುದು
ಸೂರ್ಯಕಿರಣ ವೈಮಾನಿಕ ತಂಡದ
ತರಬೇತಿ ಕೇಂದ್ರವು ಇಲ್ಲಿಹುದು
ಕರ್ನಾಟಕದ ಸ್ವಚ್ಛ ನಗರದೊಳು
ಐದನೆ ಸ್ಥಾನ ಪಡೆದಿಹುದು
ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ಖರಲಿ
ಸೌಹಾರ್ದತೆಯನು ಮೆರೆದಿಹುದು
ಬಸವ ಕಲ್ಯಾಣದಿ ಬಸವಣ್ಣ ನೆಲೆಸಿದ
ಪುಣ್ಯ ಭೂಮಿಯು ಈ ನಾಡು
ಶರಣ ಸಾಹಿತ್ಯದ ಅನುಭವ
ಮಂಟಪದೂರೇ ಈ ಬೀಡು
ಶರಣ ಶರಣೆಯರು ತಮ್ಮಅನಿಸಿಕೆಗಳ
ವಚನದ ಮೂಲಕ ಸಾರಿದರು
ಸಮಾಜದಲ್ಲಿನ ಮೇಲು ಕೀಳಿನಲಿ
ಬದಲಾವಣೆಯನು ತಂದಿಹರು
ಹೊಸತನ ಹೊಸ ಬರಹದ
ವಚನ ಸಾಹಿತ್ಯವ ಬಿತ್ತಿದರು
ಶೈವ ಸಂಸ್ಕೃತಿ ಸಾರುತ ವಿಶ್ವದಿ
ರಾಜ್ಯಕ್ಕೆ ಹೆಮ್ಮೆಯ ತಂದುಕೊಟ್ಟರು
ಕನ್ನಡ ಕಟ್ಟುವ ಸಾಹಿತ್ಯ ರಚಿಸುವ
ಸಾಹಿತಿಗಳೂ ಇಲ್ಲಿಹರು
ವೀರೇಂದ್ರ ಸಿಂಪಿ ದೇಶಾಂಶ ಹುಡುಗಿ
ವಿಸಾಜಿ ಯಂಥ ಮುಂತಾದವರು
ಶಿಕ್ಷಣ ಕ್ಷೇತ್ರ, ದಲಿತೋದ್ಧಾರ, ಕನ್ನಡಕ್ಕೆ
ಅಪಾರ ಸೇವೆಯನು ಸಲ್ಲಿಸಿದವರು
ಭಾಲ್ಕಿ ಪಟ್ಟಣದ ಶತಾಯುಷಿ
ಶ್ರೀ ಚನ್ನಬಸವ ಪಟ್ಟದ ದೇವರು
ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More
ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More
ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ. ಶಾಸಕ… Read More
ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,640 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಸೆ.19ರಿಂದ ಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ… Read More
This website uses cookies.
Leave a Comment