
ಜಾನಪದ ಶೈಲಿಯಲ್ಲಿ ಕವನ :
ಕರ್ನಾಟಕದ ಕಿರೀಟವೆಂದೇ
ಖ್ಯಾತಿ ಪಡೆದಿಹ ಜಿಲ್ಲೆಯಿದು
ಬಹಮನಿ ಸುಲ್ತಾನ್ರು ಕಟ್ಟಿದ
ರಾಜಧಾನಿಯ ನಗರ ಇದು
ಸ್ವಾತಂತ್ರ್ಯ ನಂತರ ಬೀದರ್ ಭೂಮಿಯು
ಮೈಸೂರು ರಾಜ್ಯಕೆ ಸೇರಿಹುದು
ಏಕೀಕರಣದ ಸಮಯದಿ ಇದು
ಬೀದರ್ ಜಿಲ್ಲೆಯು ಆಗಿಹುದು
“ಬಿದ್ರಿ” ಎಂಬ ಕರಕುಶಲತೆಗೆ
ವಿಶೇಷ ಪ್ರಸಿದ್ಧಿ ಪಡೆದಿಹುದು
ಸೂರ್ಯಕಿರಣ ವೈಮಾನಿಕ ತಂಡದ
ತರಬೇತಿ ಕೇಂದ್ರವು ಇಲ್ಲಿಹುದು
ಕರ್ನಾಟಕದ ಸ್ವಚ್ಛ ನಗರದೊಳು
ಐದನೆ ಸ್ಥಾನ ಪಡೆದಿಹುದು
ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ಖರಲಿ
ಸೌಹಾರ್ದತೆಯನು ಮೆರೆದಿಹುದು
ಬಸವ ಕಲ್ಯಾಣದಿ ಬಸವಣ್ಣ ನೆಲೆಸಿದ
ಪುಣ್ಯ ಭೂಮಿಯು ಈ ನಾಡು
ಶರಣ ಸಾಹಿತ್ಯದ ಅನುಭವ
ಮಂಟಪದೂರೇ ಈ ಬೀಡು
ಶರಣ ಶರಣೆಯರು ತಮ್ಮಅನಿಸಿಕೆಗಳ
ವಚನದ ಮೂಲಕ ಸಾರಿದರು
ಸಮಾಜದಲ್ಲಿನ ಮೇಲು ಕೀಳಿನಲಿ
ಬದಲಾವಣೆಯನು ತಂದಿಹರು
ಹೊಸತನ ಹೊಸ ಬರಹದ
ವಚನ ಸಾಹಿತ್ಯವ ಬಿತ್ತಿದರು
ಶೈವ ಸಂಸ್ಕೃತಿ ಸಾರುತ ವಿಶ್ವದಿ
ರಾಜ್ಯಕ್ಕೆ ಹೆಮ್ಮೆಯ ತಂದುಕೊಟ್ಟರು
ಕನ್ನಡ ಕಟ್ಟುವ ಸಾಹಿತ್ಯ ರಚಿಸುವ
ಸಾಹಿತಿಗಳೂ ಇಲ್ಲಿಹರು
ವೀರೇಂದ್ರ ಸಿಂಪಿ ದೇಶಾಂಶ ಹುಡುಗಿ
ವಿಸಾಜಿ ಯಂಥ ಮುಂತಾದವರು
ಶಿಕ್ಷಣ ಕ್ಷೇತ್ರ, ದಲಿತೋದ್ಧಾರ, ಕನ್ನಡಕ್ಕೆ
ಅಪಾರ ಸೇವೆಯನು ಸಲ್ಲಿಸಿದವರು
ಭಾಲ್ಕಿ ಪಟ್ಟಣದ ಶತಾಯುಷಿ
ಶ್ರೀ ಚನ್ನಬಸವ ಪಟ್ಟದ ದೇವರು
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು