ತ್ಯಾಜ್ಯ ಸಂಗ್ರಹಣೆಯ ವಾಹನಗಳಿಗೆ ಕಸವನ್ನು ಹಾಕಲು ಬೆಂಗಳೂರಿಗರು ಬಹಳ ಹೊತ್ತು ಕಾಯಬೇಕಿತ್ತು. ವಾಹನ ಯಾವಾಗ ಬರುತ್ತದೋ ಏನೋ ಎಂದು ತಮ್ಮ ಕೆಲಸಗಳನ್ನು ಬಿಟ್ಟು ಕಾಯಬೇಕಿತ್ತು. ಈ ಸಮಸ್ಯೆಯ ನಿವಾರೆಣೆಗೆಂದೇ ಬಿಬಿಎಂಪಿ ಹೊಸ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದೆ.
ಈ ಮಾಹಿತಿಯನ್ನು ಸುದ್ದಿಗಾರರೊಡನೆ ಹಂಚಿಕೊಂಡ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ‘ಇನ್ನು ಮುಂದೆ ನಾಗರೀಕರು ತ್ಯಾಜ್ಯ ಸಂಗ್ರಹಣಾ ವಾಹನ ಯಾವ ಸ್ಥಳದಲ್ಲಿದೆ ಮತ್ತು ತಮ್ಮ ಸ್ಥಳದಿಂದ ಎಷ್ಟು ದೂರವಿದೆ ಎಂಬುದನ್ನು ಆ್ಯಪ್ ನ ಮುಖಾಂತರ ತಿಳಿಯಬಹುದಾಗಿದೆ’ ಎಂದಿದ್ದಾರೆ.
‘ಒಂದು ವೇಳೆ ತ್ಯಾಜ್ಯ ಸಂಗ್ರಹಣಾ ವಾಹನವು ಅವರ ಮನೆಯ ಕಸವನ್ನು ಹಾಕಿಸಿಕೊಳ್ಳುವದನ್ನು ತಪ್ಪಿಸಿದರೆ ಅಥವಾ ಇನ್ನ್ಯಾವುದೇ ದೂರುಗಳಿದ್ದಲ್ಲಿ ಜನರು ಆ್ಯಪ್ ನ ಮುಖಾಂತರವೇ ದೂರು ದಾಖಲಿಸಬಹುದಾಗಿದೆ’ ಎಂದಿದ್ದಾರೆ.
‘ನಮ್ಮ ತ್ಯಾಜ್ಯ, ನಮ್ಮ ಜವಾಬ್ದಾರಿ’ ಎಂಬ ಘೋಷಣೆಯೊಡನೆ ಬಿಬಿಎಂಪಿಯು ಪ್ರತಿಯೊಂದು ವಾರ್ಡ್ ನಲ್ಲಿ ಮಿಶ್ರಗೊಬ್ಬರ ಘಟಕವನ್ನು ಸ್ಥಾಪಿಸಲು ಯೋಚಿಸಿರುವ ಬಗ್ಗೆ ಹೇಳಿದ ಆಯುಕ್ತರು, ‘ಈ ಘಟಕವು ಹಸಿ ಕಸವನ್ನು ಮಿಶ್ರಗೊಬ್ಬರವನ್ನಾಗಿ ಪರಿವರ್ತಿಸುತ್ತದೆ’ ಎಂದಿದ್ದಾರೆ.
‘ಹಾಗೆಯೇ, ಸೀಗೆ ಹಳ್ಳಿ ಮತ್ತು ಕಮ್ಮನಹಳ್ಳಿಯ ಹತ್ತಿ ೧೦೦೦ ಕಿಲೋ ವ್ಯಾಟ್ ನ ಸ್ಥಾವರ ಘಟಕಗಳನ್ನು ಸ್ಥಾಪಿಸಲು ಬಿಬಿಎಂಪಿ ಯೋಜನೆ ರೂಪಿಸುತ್ತಿದೆ. ಅಲ್ಲದೆ, ಮಾವಳಿಪುರದಲ್ಲಿ ಎರಡು ಹಾಗೂ ದೊಡ್ಡಬಿದರುಕಲ್ಲಿನಲ್ಲಿ ಒಂದು ಸ್ಥಾವರಗಳನ್ನು ರೂಪಿಸುವ ಯೋಚನೆ ಇದೆ’ ಎಂದು ಆಯುಕ್ತರು ಹೇಳಿದರು.
ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More
ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More
ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ. ಶಾಸಕ… Read More
ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,640 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಸೆ.19ರಿಂದ ಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ… Read More
This website uses cookies.
Leave a Comment