ಪೂರ್ಣ ಪ್ರಮಾಣದ ಜಾತ್ರೆಗೆ ಪೋಲೀಸರು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಭಕ್ತ ಸಮೂಹ ದಾಂದಲೆ ಅರಂಭಿಸಿದ್ದರಿಂದ ಪೋಲಿಸರು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ನಿಯಂತ್ರಣ ತಂದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಸಂಬಂವಿಸಿದೆ.
ತೆಕ್ಕಲುಕೋಟೆಯ ಕಾಡುಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ ವೇಳೆ ಈ ಘಟನೆ ಜರುಗಿದೆ.
ನಾವು ಪೂರ್ಣ ಪ್ರಮಾಣದ ಜಾತ್ರೆ ಮಾಡಬೇಕು ಎಂದು ಭಕ್ತರು ಕೇಳಿಕೊಂಡರೂ ಪೋಲಿಸರು ಅವಕಾಶ ನೀಡದೇ ಹೋದಾಗ ಭಕ್ತ ಸಮೂಹ ಬ್ಯಾರಿಕೇಡ್ ತಳ್ಳಿ ಗಲಾಟೆ ಆರಂಭಿಸಿದಾಗ ಪೋಲಿಸರು ಲಾಠಿ ಪ್ರಹಾರ ಮಾಡಿದ್ದಾರೆ.