ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ : ಬ್ಯಾಟರಾಯನಪುರ ಪಿಎಸ್ಐ ಅಮಾನತ್ತು

Team Newsnap
0 Min Read

ಕೇಸ್​ ದಾಖಲಿಸದೆ ಠಾಣೆಗೆ ಕರೆತಂದು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣ ಸಂಬಂಧ ಬ್ಯಾಟರಾಯನಪುರ ಪಿಎಸ್ ಐ ಹರೀಶ್​ರನ್ನು ಅಮಾನತು ಮಾಡಲಾಗಿದೆ.

ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹರೀಶ್​ರನ್ನು ಕರ್ತವ್ಯ ಲೋಪ ಹಿನ್ನೆಲೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಸಸ್ಪೆಂಡ್ ಮಾಡಿದ್ದಾರೆ.

ಮೈಸೂರು ಹಳೆಗುಡ್ಡದಹಳ್ಳಿ ನಿವಾಸಿ ತೌಸಿಫ್ ಪಾಷಗೆ ಪಿಎಸ್ ಐ ಹರೀಶ್​ ಥಳಿಸಿದ ಆರೋಪದ ಹಿನ್ನಲೆ ಎಸಿಪಿ ನೇತೃತ್ವದಲ್ಲಿ ಡಿಸಿಪಿ ತನಿಖೆಗೆ ಆದೇಶಿಸಿದ್ದರು

ಇನ್ನು ಈ ಪ್ರಕರಣದ ಮಧ್ಯಂತರ ವರದಿ ಬಳಿಕ ಪಿಎಸ್ ಐ ಹರೀಶ್​ರನ್ನು ಡಿಸಿಪಿ ಸಸ್ಪೆಂಡ್ ಮಾಡಿದ್ದಾರೆ.

Share This Article
Leave a comment