ಕೇಸ್ ದಾಖಲಿಸದೆ ಠಾಣೆಗೆ ಕರೆತಂದು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣ ಸಂಬಂಧ ಬ್ಯಾಟರಾಯನಪುರ ಪಿಎಸ್ ಐ ಹರೀಶ್ರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹರೀಶ್ರನ್ನು ಕರ್ತವ್ಯ ಲೋಪ ಹಿನ್ನೆಲೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಸಸ್ಪೆಂಡ್ ಮಾಡಿದ್ದಾರೆ.
ಮೈಸೂರು ಹಳೆಗುಡ್ಡದಹಳ್ಳಿ ನಿವಾಸಿ ತೌಸಿಫ್ ಪಾಷಗೆ ಪಿಎಸ್ ಐ ಹರೀಶ್ ಥಳಿಸಿದ ಆರೋಪದ ಹಿನ್ನಲೆ ಎಸಿಪಿ ನೇತೃತ್ವದಲ್ಲಿ ಡಿಸಿಪಿ ತನಿಖೆಗೆ ಆದೇಶಿಸಿದ್ದರು
ಇನ್ನು ಈ ಪ್ರಕರಣದ ಮಧ್ಯಂತರ ವರದಿ ಬಳಿಕ ಪಿಎಸ್ ಐ ಹರೀಶ್ರನ್ನು ಡಿಸಿಪಿ ಸಸ್ಪೆಂಡ್ ಮಾಡಿದ್ದಾರೆ.