ಸೂರ್ಯವಂಶದ ಶ್ರೇಷ್ಠ ಚಕ್ರವರ್ತಿ ದಿಲೀಪ ರಾಜನು ವಿಶ್ವಜಿತ್ ಯಜ್ಞವನ್ನು ಇಲ್ಲಿ ನಡೆಸಿದ ಎಂದು ಪುರಾಣ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.
ರಘು ವಂಶದ ರಾಜರ ಕಾಲದಲ್ಲಿ ಇದು ರಾಜಧಾನಿಯ ಕೀರ್ತಿ ಪಡೆಯಿತು. ವಶಿಷ್ಠ ಋಷಿಗಳ ಸೂಚನೆಯ ಮೇರೆಗೆ ದಶರಥ ಮಹಾರಾಜನು ಇಲ್ಲಿ ಋಷ್ಯಶೃಂಗರ ಮುಂದಾಳತ್ವದಲ್ಲಿ ಪುತ್ರಕಾಮೆಷ್ಠಿ ಯಜ್ಞವನ್ನು ಇಲ್ಲಿ ನಡೆಸಿದನು. ಸ್ವತಹ ಭಗವಂತನೇ ದಶರಥನ ಸುತನಾಗಿ ಬಂದು ರಾಮರೂಪದಲ್ಲಿ ಪುರುಷೋತ್ತಮ ಎನಿಸಿದ ಎಂಬ ಅಂಶವನ್ನು ಸ್ಮರಿಸಬಹುದು. ಅಯೋಧ್ಯೆಗೆ ಸಾಕೇತಪುರ ಎಂಬ ಇನ್ನೊಂದು ಹೆಸರು ಕೂಡ ಇದೆ.
ಅಜ ಮತ್ತು ಇಂದುಮತಿಯರ ವಿವಾಹವಾದ ಸ್ಥಳ ಇದಾಗಿದೆ. ದಶರಥ ಪುತ್ರಿ ಶಾಂತಾದೇವಿಯನ್ನು ವೃಷ್ಯಶೃಂಗರು ವರಿಸಿದರು ಎನ್ನುವ ಘಟನೆ ನಡೆದದ್ದು ಇದೇ ಅಯೋಧ್ಯಾಪುರದಲ್ಲಿ. ಭೂಮಿ ಸುತೆ ಸೀತೆಯು ಹೇಮ ದುಪ್ಪರಗಿಯಲ್ಲಿ ಅತ್ತೆಯರೊಂದಿಗೂ ಹಾಗೂ ಅರಮನೆಯ ಪರಿವಾರದವರೊಂದಿಗೂ ಸಂಭ್ರಮ ಮತ್ತು ಸಡಗರದಿಂದ ಕಾಲ ಕಳೆದ ಅಯೋಧ್ಯಾನಗರ ಒಂದು ಕಾಲದಲ್ಲಿ ವೈಭವದ ಸ್ಥಳವಾಗಿತ್ತು. ಸರಿಯು ನದಿಯ ತೀರದಲ್ಲಿ ವಿಶಾಲವಾಗಿ ಹರಡಿದ ಅಯೋಧ್ಯಾನಗರ ಗಂಗಾ ಯಮುನಾ ಸರಸ್ವತಿಯರೊಂದಿಗೆ ಸರಿಯು ಕೂಡ ಅಷ್ಟೇ ಪರಮ ಪವಿತ್ರ ನದಿಯಾಗಿ ಕಾಣಿಸಿದ್ದಾಳೆ. ಹಿಮಾಲಯದಲ್ಲಿ ಹುಟ್ಟಿ ದ ಕ್ಷಣಕ್ಕೆ ಧಾವಿಸಿ ಅಯೋಧ್ಯೆಯನ್ನು ಆರಂಭಿಸಿ ಹರಿದಿದ್ದಾಳೆ ಸರೆಯು. ಗಂಗೆ ವಿಷ್ಣುವಿನ ಪಾದದಿಂದ ಹರಿದವಳಾದರೆ ಸೆರೆಯು ಅವನ ಕಣ್ಗಳಿಂದ ಹೊರಟವಳು. ಇದಕ್ಕಾಗಿಯೇ ಸರಿಯು ನದಿಯನ್ನು ನೇತ್ರಾ ಎಂದು ಕೂಡ ಕರೆಯುತ್ತಾರೆ.
ಅಯೋಧ್ಯೆ ವಿಷ್ಣುವಿನ ಶಿರಭಾಗ ಎಂದು ಕರೆಯಲಾಗುತ್ತದೆ. ಅಯೋಧ್ಯ ಆಳಿದ ರಾಜರಲ್ಲಿ ಸತ್ಯಹರಿಶ್ಚಂದ್ರ ಅತ್ಯಂತ ಸೂಪ್ರಸಿದ್ಧ ರಾಜನಾಗಿದ್ದ. ವಿಶ್ವಾಮಿತ್ರನ ಸತ್ವ ಪರೀಕ್ಷೆಗೆ ಗುರಿಯಾಗಿ ಅಯೋಧ್ಯೆಯ ಅಧಿಕಾರವನ್ನು ಕಳೆದುಕೊಂಡ. ಆದರೆ, ತನ್ನ ಸತ್ಯನಿಷ್ಠೆಯ ಫಲವಾಗಿ ಮತ್ತೆ ರಾಜ್ಯನಾಗಿ ಪುರಾಣ ಪ್ರಸಿದ್ಧನಾದ. ಅಯೋಧ್ಯೆಯ ಅರಸರಾದವರಲ್ಲಿ ಪ್ರಭು ರಾಮಚಂದ್ರ 65ನೇ ಯವರು. ಮಹಾಭಾರತ ಕಾಲದಲ್ಲಿ ಬೃಹಬಾಹು ಅಯೋಧ್ಯೆಯ ರಾಜನಾಗಿದ್ದ. ಅವನು ಯುದ್ಧದಲ್ಲಿ ಅಭಿಮನ್ಯುವಿನ ಬಾಣಕ್ಕೆ ಪ್ರಾಣಬಿಟ್ಟ.ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ಶ್ರೀರಾಮನ ಕಾಲದಲ್ಲಿ ಅಯೋಧ್ಯೆಯು 12 ಯೋಜನೆ ಉದ್ದ ಮತ್ತು ಮೂರು ಯೋಜನೆ ಅಗಲದ ಮಹಾ ನಗರವಾಗಿತ್ತು. ಮಾರುಕಟ್ಟೆ ವಿಶಾಲವಾದ ರಾಜಭೀದಿಗಳು ದೊಡ್ಡ ದೊಡ್ಡ ಕಟ್ಟಡಗಳು ಬಲಿಷ್ಠ ಸೇನೆ ಹೀಗೆ ವೈಕುಂಠ ನಗರದ ಕಲ್ಪನೆಯನ್ನು ನಾಚಿಸುವ ರೀತಿಯಲ್ಲಿ ಅಯೋಧ್ಯೆ ಗಂಗೊಳ್ಳಿಸಿತು. ಸನಾತನ ಹಿಂದೂ ಸಂಸ್ಕೃತಿಯಲ್ಲಿ .. ಪುರಾಣಗಳಲ್ಲಿ.. ಅಯ್ಯೋದ್ಯೆಗೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿತ್ತು. ಹಿಂದುಗಳ ಶ್ರದ್ಧಾ ಕೇಂದ್ರವಾದ ಅಯೋಧ್ಯೆಗೆ ಈಗ ಮತ್ತೆ ಗತವೈಭವ ಬಂದಿದೆ. ಅನೇಕ ಏರಿಳಿತಗಳ ನಡುವೆ ಅಯೋಧ್ಯೆ ಮತ್ತೆ ಶ್ರೀರಾಮನ ಭಕ್ತರಿಗೆ ಪವಿತ್ರ ತೀರ್ಥಕ್ಷೇತ್ರವಾಗಿ ಹೊರಹೊಮ್ಮಿದೆ.
ಹನುಮೇಶ್ ಕೆ ಯಾವಗಲ್
ಹಿರಿಯ ಪತ್ರಕರ್ತರು.
ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More
ಐದು ದಿನಗಳ ಜೈಲು ವಾಸಕ್ಕೆ ಅಂತ್ಯ 5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More
ಬೆಂಗಳೂರು : ಪ್ರಜ್ವಲ್ ರೇವಣ್ಣ ವಿಚಾರದ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್ನಲ್ಲಿ ಸಂತ್ರಸ್ತೆ… Read More
ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More
ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More
ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More
This website uses cookies.
Leave a Comment