ಮದುವೆ ಬೇಡಿಕೆಯನ್ನು ತಿರಸ್ಕರಿಸಿದ್ದಕ್ಕೆ ಕೋಪಿಸಿಕೊಂಡ ವ್ಯಕ್ತಿಯೊಬ್ಬ ಯುವತಿಯನ್ನು ಚಲಿಸುತ್ತಿದ್ದ ರೈಲಿನ ಬಳಿಯೇ ಹಳಿಗೆ ಕೆಳಗೆ ನೂಕಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಮುಂಬೈನ ಖಾರ್ ನಿಲ್ದಾಣದಲ್ಲಿ ಈ ಕೃತ್ಯ ನಡೆದಿದೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಖಾರ್ ನಿವಾಸಿಯಾಗಿರುವ ಮಹಿಳೆಯ ತಲೆಗೆ ಬಲವಾದ ಏಟುಬಿದ್ದಿದೆ. 12 ಹೊಲಿಗೆ ಹಾಕಲಾಗಿದೆ ಅಂತಾ ವರದಿಯಾಗಿದೆ.
ಆರೋಪಿ ವ್ಯಕ್ತಿ ಹಾಗೂ ಮಹಿಳೆ ಕಳೆದ ಎರಡು ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಉತ್ತಮ ಸ್ನೇಹ ಕೂಡ ಬೆಳೆದಿತ್ತು. ಆದರೆ ಇತ್ತೀಚೆಗೆ ಆರೋಪಿ ಕುಡಿತದ ದಾಸನಾಗಿದ್ದ. ಇದು ಆಕೆಗೆ ಗೊತ್ತಾಗಿದ್ದರಿಂದ ಅವನನ್ನು ದೂರ ಮಾಡಿದ್ದಳು ಎನ್ನಲಾಗಿದೆ. ಇದರಿಂದ ಕೋಪಿಸಿಕೊಂಡಿದ್ದ ಆರೋಪಿ ಪದೇ ಪದೇ ಮಹಿಳೆಗೆ ಕಾಟ ಕೊಡಲು ಆರಂಭಿಸಿದ್ದ. ಇದರಿಂದ ನೊಂದ ಮಹಿಳೆ ದೂರು ಕೂಡ ನೀಡಿದ್ದಳು.
ವ್ಯಕ್ತಿ ಆಕೆಯನ್ನು ಹಿಂಬಾಲಿಸಿ ಅಂಧೇರಿ ರೇಲ್ವೆ ನಿಲ್ದಾಣದಿಂದ ಖಾರ್ಗೆ ಬಂದಿಳಿದಿದ್ದಳು. ಆರೋಪಿ ಸುಮೇದ್.. ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುದಾಗಿ ಹೇಳಿ ಓಡಿ ಟ್ರ್ಯಾಕ್ಗೆ ಹಾರಲು ಯತ್ನಿಸಿ ವಾಪಸ್ ಆಗಿದ್ದಾನೆ. ನಂತರ ಆ ಮಹಿಳೆಯನ್ನು ಹಿಡಿದು ಟ್ರ್ಯಾಕ್ ಮೇಲೆ ಎಳೆದಾಡಿ ನೂಕಿದ್ದಾನೆ.
ಅಷ್ಟಕ್ಕೂ ಸುಮ್ಮನಾಗದ ಆರೋಪಿ ಆಕೆಯನ್ನು ಟ್ರ್ಯಾಕ್ ಒಳಗೆ ತಳ್ಳಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಟ್ರೈನ್ ಕೂಡ ಅದೇ ಟ್ರ್ಯಾಕ್ನಲ್ಲಿ ಪಾಸ್ ಆಗುತ್ತಿತ್ತು. ಸ್ವಲ್ಪ ಯಾಮಾರಿದ್ದರೂ ಆಕೆಯ ಪ್ರಾಣಕ್ಕೆ ಅಪಾಯ ಆಗುತ್ತಿತ್ತು. ತಲೆಗೆ ಗಾಯ ಮಾತ್ರ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More
ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More
ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ. ಶಾಸಕ… Read More
ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,640 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಸೆ.19ರಿಂದ ಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ… Read More
This website uses cookies.
Leave a Comment