ಪೋಲಿಸರ ಮೇಲೆ ಹಲ್ಲೆ ನಡೆಸಿದ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗಂಡು ಹಾರಿಸಿದ ಘಟನೆ ಮೈಸೂರಿನ ಬಿಳಿಕೆರೆಯಲ್ಲಿ ಜರುಗಿದೆ.
ಜಯಂತ್ ಎಂಬ ಆರೋಪಿಗೆ ಗುಂಡೇಟು ಬಿದ್ದ ಪರಿಣಾಮ ಆತನನ್ನು ಈಗ ಮೈಸೂರು ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿ ಜಯಂತ್ ನಿಂದ ದೊಣ್ಣೆ ಏಟು ತಿಂದ ಮುಖ್ಯ ಪೇದೆ ರವಿ ಹಾಗೂ ಪೇದೆ ರವಿಕುಮಾರ್ ಅವರನ್ನು ಹುಣಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹುಣಸೂರು ಬಳಿ ಜಯರಾಮನಹಳ್ಳಿ ಬಳಿ ಸಾರಿಗೆ ಬಸ್ ಚಾಲಕ ವೆಂಕಟೇಶ್ ಎಂಬುವವರು ತಮ್ಮ ವಾಹನ ಹೋಗಲು ಜಾಗ ಬಿಡಲಿಲ್ಲ ಎಂ ಕಾರಣಕ್ಕಾಗಿ ಈ ಜಯಂತ್ ಹಾಗೂ ಆತನ ಗೆಳೆಯರು ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದರು. ಈ ಸಂಬಂಧದ ವಿಡಿಯೋ ಸಾಕಷ್ಟು ವೈರಲ್ ಅಗಿತ್ತು.
ಮೂವರು ಆರೋಪಗಳನ್ನು ಬಂಧನಕ್ಕೆ ಜಾಲ ಬೀಸಿದ್ದ ಪಿಎಸ್ಐ ಜಯಪ್ರಕಾಶ್ ತಂಡ ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಜಯಂತ್, ದೀಪಕ್ ಹಾಗೂ ವಿಘ್ನೇಶ್ ಈ ಮೂವರೂ ಇರುವ ಸುಳಿವು ಅರಿತು ಅಲ್ಲಿಗೆ ಬಂಧಿಸಿ ಕರೆ ತರುವಾಗ ಬಿಳಿಕೆರೆ ಬಳಿ ಮೂತ್ರ ವಿಸರ್ಜನೆ ಗೆ ಮಾಡುವ ನೆಪದಲ್ಲಿ ಕೆಳಗೆ ಇಳಿದ ಜಯಂತ್ ದೊಣ್ಣೆ ಯಿಂದ ಇಬ್ಬರು ಪೋಲಿಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪಿಎಸ್ಐ ಜಯಪ್ರಕಾಶ್ ಜಯಂತ್ ಕಾಲಿಗೆ ಗುಂಡು ಹಾರಿಸಿದರು.
ಈ ಆರೋಪಿ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನೆಂದು ಹೇಳಲಾಗಿದೆ.
ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಸಿದ್ದ… Read More
ನವದೆಹಲಿ ,ಸೆಪ್ಟೆಂಬರ್ 25 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 70,600 ರೂಪಾಯಿ ದಾಖಲಾಗಿದೆ. 24… Read More
ಮಾಜಿ ಸಂಸದ ಪ್ರತಾಪ್ ಸಿಂಹ ಗಣೇಶ ವಿಸರ್ಜನೆ ಶೋಭಾಯಾತ್ರೆ ಮೆರವಣಿಗೆ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಡಿ ಎಫ್ಐಆರ್ ದಾಖಲಾಗಿದೆ.… Read More
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ದೊಡ್ಡ ಸಂಕಷ್ಟ ಮುಂದೆ ಅಧೀನ ನ್ಯಾಯಾಲಯ ತೀರ್ಪು ಘೋಷಿಸಬಹುದು ಸುಪ್ರೀಂ ಕೋರ್ಟ್ ಬಾಗಿಲು ತಟ್ಟಲು… Read More
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಮಹಿಷ ದಸರಾ ಕೂಗು ಕೇಳಿ ಬಂದಿದ್ದು ,ಈ ಬಾರಿಯೂ ಮಹಿಷ ದಸರಾ ವಿವಾದ… Read More
ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾಗಿರುವ… Read More
This website uses cookies.
Leave a Comment