Main News

ಅಟಲ್ ಸುರಂಗ ಮಾರ್ಗ:3 ಗಂಟೆ – 3 ಅಪಘಾತ

ಅ . 3 ರಂದು ಪ್ರಧಾನಿ ಮೋದಿ ಹಿಮಾಚಲ ಪ್ರದೇಶದ ರೋಹ್ಟಂಗ್‌ಪಾಸ್‌ನ ಅಟಲ್ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಿದ ಇಪ್ಪತ್ನಾಲ್ಕು ಗಂಟೆಗಳಲ್ಲಿ 3 ಅಪಘಾತಗಳು ಸಂಭವಿಸಿವೆ.

ಕುದುರೆ ಪಾದದ ಆಕಾರದಲ್ಲಿರುವ ಈ ಸುರಂಗ ಮಾರ್ಗದಲ್ಲಿ ಜನರು ಅಜಾಕರೂಕತೆಯಿಂದ ವಾಹನ ಚಲಾಯಿಸುವಿಕೆ ಹಾಗೂ ಮಾರ್ಗದ ಮಧ್ಯೆಯೇ ವಾಹನಗಳನ್ನು ನಿಲ್ಲಿಸಿ ಫೋಟೋಗಳನ್ನು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಿಕೆಯಿಂದ ಈ ಅಪಘಾತಗಳು ಸಂಭವಿಸಿವೆ.

ಅಟಲ್ ಸುರಂಗ ಮಾರ್ಗ ವಿಶ್ವದ ಅತೀ ಉದ್ದದ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಮಾರ್ಗವು 9.02 ಕಿಲೋಮೀಟರ್ ಉದ್ದವನ್ನು ಹೊಂದಿದೆ. 3,000 ಮೀಟರ್ ಅಥವಾ 10,000 ಅಡಿಯ ಎತ್ತರವನ್ನು ಈ ಸುರಂಗ ಹೊಂದಿದೆ. *

ಸುರಂಗ ಮಾರ್ಗವು ರಕ್ಷಣಾ ಇಲಾಖೆಯ ಅಂಗ ಸಂಸ್ಥೆಯಾದ ಗಡಿ ರಸ್ತೆ ಸಂಸ್ಥೆ(The Border Road Organisation)ಯ ನೇತೃತ್ವದಲ್ಲಿ 10 ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡಿದೆ.

ಗಡಿ ರಸ್ತೆ ಸಂಸ್ಥೆಯು ಈ ಮೂರೂ ಅಪಘಾತಗಳಿಗೆ ಸ್ಥಳೀಯ ಅಧಿಕಾರಿಗಳನ್ನು ಹಾಗೂ ಆಡಳಿತವನ್ನು ಆಪಾದಿಸಿದ ಬೆನ್ನಲ್ಲೇ 48 ಗಂಟೆಗಳೊಳಗಾಗಿ ಹಿಮಾಚಲ ಪ್ರದೇಶ ಸರ್ಕಾರವು ಅಲ್ಲಿ ಸಂಚಾರ ಪೋಲೀಸರನ್ನು ನಿಯಮಿಸದೆ.

ಗಡಿ ರಸ್ತೆ ಸಂಸ್ಥೆಯ ಮುಖ್ಯ ಎಂಜನೀಯರ್ ಕೆ.ಪಿ. ಪುರುಶೋತ್ತಮನ್ ‘ಸುರಂಗ ಮಾರ್ಗದ ಹತ್ತಿರ ಜನಗಳ ಹಾಗೂ ಪ್ರಯಾಣಿಕರ ಚಲನ-ವಲನಗಳನ್ನು ನಿಯಂತ್ರಣ ಮಾಡಲು ಪೋಲಿಸರ ಒಂದು ತುಕಡಿ ಇಡಬೇಕೆಂದು ಜುಲೈ 3 ರಂದು ಹಿಮಾಚಲದ ಪ್ರದೇಶದ ಮುಖ್ಯಮಂತ್ರಿಗಳ ಸಲಹೆಗಾರ ಮತ್ತು ಆಪ್ತಸಹಾಯಕನಿಗೆ ಮತ್ತು ಅಕ್ಟೋಬರ್ 3 ರಂದು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದರು. ಅಲ್ಲದೇ ಗಡಿ ರಸ್ತೆ ಸಂಸ್ಥೆ, ಸ್ಥಳೀಯ ನಾಗರೀಕ ಅಧಿಕಾರಿಗಳಿಗೆ ಸುರಂಗ ಮಾರ್ಗದ ಹತ್ತಿರ ಅಗ್ನಿಶಾಮಕ ಉಪಕರಣಗಳ ಠಾಣೆಯೊಂದನ್ನು ಸ್ಥಾಪಿಸುವಂತೆ ಕೇಳಿಕೊಂಡಿತ್ತು. ಆದರೆ ಅಲ್ಲಿನ ಆಡಳಿತಗಳು ಇದ್ಯಾವುದನ್ನೂ ಮಾಡಿಲ್ಲ.’ ಎನ್ನುತ್ತಾರೆ.

‘ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪ್ರಯಾಣಿಕರ ಅಜಾಗರೂಕತೆ ಮತ್ತು ಸೆಲ್ಫೀಗಳನ್ನು ತೆಗೆದುಕೊಳ್ಳಲು ಮಾರ್ಗದ ಮಧ್ಯೆಯೇ ವಾಹನ ನಿಲ್ಲಿಸುವುದು ಇವುಗಳೆಲ್ಲ ಅಪಘಾತಕ್ಕೆ ಕಾರಣವಾಗಿವೆ. ಸುರಂಗದ ಉದ್ಘಾಟನೆಯ ದಿನವೂ ಸಹ ಫೈರ್ ಇಂಜಿನ್‌ಗಳನ್ನು ನಿಲ್ಲಿಸುವಂತೆ, ಕಾವಲು ಸಿಬ್ಬಂದಿಯನ್ನು ಹಾಕಲು ಹೇಳಿದ್ದರೂ, ಅಲ್ಲಿನ ಆಡಳಿತಗಳು ಕಾವಲು ಸಿಬ್ಬಂದಿಯನ್ನು ಹಾಕಿರಲಿಲ್ಲ.’ ಎಂದು ಹೇಳಿದರು.

ಅಟಲ್ ಸುರಂಗ ಮಾರ್ಗದ ಮೂಲಕ ಪೆಟ್ರೋಲಿಯಮ್, ತೈಲ, ಹೊಗೆ ಹರಡಬಹುದಾಂತ ವಸ್ತುಗಳನ್ನು ಸಾಗಿಸಲು ಗಡಿ ರಸ್ತೆ ಸಂಸ್ಥೆ ಅನುಮತಿ ನೀಡಿಲ್ಲ. ಅಲ್ಲದೇ ಈಗ ಅಲ್ಲಿ ಓಡಾಡುವ ವಾಹನಗಳ ವೇಗವನ್ನು 80 ಕಿಲೋಮೀಟರ್‌ಗಳಿಗೆ ಮಾತ್ರ ಸೀಮಿತಗೊಳಿಸಿದೆ.

Team Newsnap
Leave a Comment
Share
Published by
Team Newsnap

Recent Posts

ರೇವಣ್ಣ ರಿಲೀಸ್ : ಬಿಗ್ ರಿಲೀಪ್

ಐದು ದಿನಗಳ ಜೈಲು ವಾಸಕ್ಕೆ ಅಂತ್ಯ ⁠5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More

May 13, 2024

ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ… Read More

May 13, 2024

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್

ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More

May 13, 2024

CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More

May 13, 2024

ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ

ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More

May 13, 2024

ಕರ್ನೂಲಿನಲ್ಲಿ ಭೀಕರ ರಸ್ತೆ ಅಪಘಾತ: ಮಂಡ್ಯದ ನಟಿ `ಪವಿತ್ರ ಜಯರಾಂ’ ಸಾವು

ಬೆಂಗಳೂರು : ತೆಲುಗಿನ 'ತ್ರಿನಯನಿ' ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ, ಮಂಡ್ಯದ ಹನಕೆರೆ ಪವಿತ್ರ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲು… Read More

May 12, 2024