Karnataka

ಬಾಲ್ಯದಲ್ಲಿ ನಾನು ಸುಮಲತಾರನ್ನು ಮದ್ವೆ ಆಗ್ತೇನಿ ಅಂತಾ ಹೇಳ್ತಿದ್ದ ಈ ಅಪ್ಪು-ಸುಮಲತಾ ಕಣ್ಣೀರು

ಪುಟ್ಟ ಮಗುವಾಗಿದ್ದಾಗ ನೀನು ಯಾರನ್ನು ಮದ್ವೆ ಆಗುತ್ತೀಯಾ ಅಂದ್ರೆ ಸುಮಲತಾ ಅಂತಿದ್ದ ಈ ಅಪ್ಪುಎಂದು ಅಪ್ಪುವಿನ ಬಾಲ್ಯ ದಿನಗಳನ್ನು ಸಂಸದೆ ಸುಮಲತಾ ಸ್ಮರಿಸಿ ಕಣ್ಣೀರು ಹಾಕಿದರು.

ಅಪ್ಪು ನಿಧನ ನಮಗೆ ಮಾತ್ರ ಅಲ್ಲ ಇಡೀ ಕನ್ನಡ ಚಿತ್ರರಂಗಕ್ಕೆ ಇದುಬಹುದೊಡ್ಡ ಶಾಕಿಂಗ್​ ನ್ಯೂಸ್​​, ಬಹುದೊಡ್ಡ ನಷ್ಟ. ಪುನೀತ್​ ಇನ್ನಿಲ್ಲ ಅನ್ನೋದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ಇಲ್ವಾ ಎಂದರೇ ಅರ್ಥನೇ ಆಗ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್​ ಕಣ್ಣೀರಿಟ್ಟಿದ್ದಾರೆ.

ನಿನ್ನೆವರೆಗೂ ಎಲ್ಲ ಕಡೆ ಓಡಾಡಿಕೊಂಡಿದ್ದ ಅಪ್ಪು ಈಗ ಇಲ್ಲ ಎಂದರೇ ಹೇಗೆ ನಂಬಬೇಕು. ನಿನ್ನೆ ಭಜರಂಗಿ ಸಿನಿಮಾ ಪ್ರಮೋಷನ್​ನಲ್ಲಿ ಯಶ್​, ಶಿವರಾಜ್​ಕುಮಾರ್ ಜೊತೆ ಡ್ಯಾನ್ಸ್ ಮಾಡಿದನ್ನು ನೋಡಿದ್ದೆ ಎಂದು ಹೇಳಿದರು.

ಮೊದ ಮೊದಲು ರಾಜ್​ಕುಮಾರ್​ ಅವರೊಂದಿಗೆ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದೆ. ಆಗ ಪಾರ್ವತಮ್ಮ ಅವರೊಂದಿಗೆ 4 ವರ್ಷದ ಪುನೀತ್​ ಶೂಟಿಂಗ್​ಗೆ ಬರುತ್ತಿದ್ದ. ಆಗ ನನ್ನೊಂದಿಗೆ ತುಂಬಾ ಆತ್ಮೀಯನಾಗಿದ್ದ, ಶೂಟಿಂಗ್​ ಸೆಟ್​​ನಲ್ಲಿ ಕಣ್ಣಮುಚ್ಚಾಲೇ ಆಡೋದು, ಆಟ ಆಡೋದು ಎಲ್ಲವನ್ನು ಮಾಡುತ್ತಿದ್ದೇವು. ಆಗ ಮನೆಗೆ ಹೋಗಿ ನಾನು ಸುಮಲತಾರನ್ನೇ ಮದುವೆ ಆಗ್ತೀನಿ ಅಂತಾ ಅತ್ತು ಹಠ ಮಾಡಿದ್ದರಂತೆ. ಇದನ್ನು ರಾಜ್​​ಕುಮಾರ್ ಅವರೇ ನನಗೆ ಹೇಳಿದ್ದರು ಎಂದು ಸುಮಲತಾ ಕಣ್ಣೀರಿಟ್ಟರು.

Team Newsnap
Leave a Comment
Share
Published by
Team Newsnap

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024