ಪುಟ್ಟ ಮಗುವಾಗಿದ್ದಾಗ ನೀನು ಯಾರನ್ನು ಮದ್ವೆ ಆಗುತ್ತೀಯಾ ಅಂದ್ರೆ ಸುಮಲತಾ ಅಂತಿದ್ದ ಈ ಅಪ್ಪುಎಂದು ಅಪ್ಪುವಿನ ಬಾಲ್ಯ ದಿನಗಳನ್ನು ಸಂಸದೆ ಸುಮಲತಾ ಸ್ಮರಿಸಿ ಕಣ್ಣೀರು ಹಾಕಿದರು.
ಅಪ್ಪು ನಿಧನ ನಮಗೆ ಮಾತ್ರ ಅಲ್ಲ ಇಡೀ ಕನ್ನಡ ಚಿತ್ರರಂಗಕ್ಕೆ ಇದುಬಹುದೊಡ್ಡ ಶಾಕಿಂಗ್ ನ್ಯೂಸ್, ಬಹುದೊಡ್ಡ ನಷ್ಟ. ಪುನೀತ್ ಇನ್ನಿಲ್ಲ ಅನ್ನೋದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ಇಲ್ವಾ ಎಂದರೇ ಅರ್ಥನೇ ಆಗ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಕಣ್ಣೀರಿಟ್ಟಿದ್ದಾರೆ.
ನಿನ್ನೆವರೆಗೂ ಎಲ್ಲ ಕಡೆ ಓಡಾಡಿಕೊಂಡಿದ್ದ ಅಪ್ಪು ಈಗ ಇಲ್ಲ ಎಂದರೇ ಹೇಗೆ ನಂಬಬೇಕು. ನಿನ್ನೆ ಭಜರಂಗಿ ಸಿನಿಮಾ ಪ್ರಮೋಷನ್ನಲ್ಲಿ ಯಶ್, ಶಿವರಾಜ್ಕುಮಾರ್ ಜೊತೆ ಡ್ಯಾನ್ಸ್ ಮಾಡಿದನ್ನು ನೋಡಿದ್ದೆ ಎಂದು ಹೇಳಿದರು.
ಮೊದ ಮೊದಲು ರಾಜ್ಕುಮಾರ್ ಅವರೊಂದಿಗೆ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದೆ. ಆಗ ಪಾರ್ವತಮ್ಮ ಅವರೊಂದಿಗೆ 4 ವರ್ಷದ ಪುನೀತ್ ಶೂಟಿಂಗ್ಗೆ ಬರುತ್ತಿದ್ದ. ಆಗ ನನ್ನೊಂದಿಗೆ ತುಂಬಾ ಆತ್ಮೀಯನಾಗಿದ್ದ, ಶೂಟಿಂಗ್ ಸೆಟ್ನಲ್ಲಿ ಕಣ್ಣಮುಚ್ಚಾಲೇ ಆಡೋದು, ಆಟ ಆಡೋದು ಎಲ್ಲವನ್ನು ಮಾಡುತ್ತಿದ್ದೇವು. ಆಗ ಮನೆಗೆ ಹೋಗಿ ನಾನು ಸುಮಲತಾರನ್ನೇ ಮದುವೆ ಆಗ್ತೀನಿ ಅಂತಾ ಅತ್ತು ಹಠ ಮಾಡಿದ್ದರಂತೆ. ಇದನ್ನು ರಾಜ್ಕುಮಾರ್ ಅವರೇ ನನಗೆ ಹೇಳಿದ್ದರು ಎಂದು ಸುಮಲತಾ ಕಣ್ಣೀರಿಟ್ಟರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು