February 21, 2026

Newsnap Kannada

The World at your finger tips!

police

ಪೋಲೀಸ್ ಮೇಲೆ ಹಲ್ಲೆ: ಕಾಂಗ್ರೆಸ್ ಎಂಎಲ್ ಸಿ ಪುತ್ರ ಸೇರಿ ಮೂವರು ಅಂದರ್

Spread the love

ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್‌ ಎಂಎಲ್‌ ಸಿ ನಸೀರ್‌ ಅಹ್ಮದ್‌‌ ಪುತ್ರ ಫಯಾಜ್‌ ಸೇರಿ ಮೂವರನ್ನು ಅಮೃತಹಳ್ಳಿ ಠಾಣಾ ಪೊಲೀಸರು ಅರೆಸ್ಟ್ ಮಾಡಿ ಅಂದರ್ ಮಾಡಿದ್ದಾರೆ.

ಎಂಎಲ್‌ ಸಿ ನಸೀರ್‌ ಅಹ್ಮದ್‌‌ ಪುತ್ರ ಫಯಾಜ್‌, ಇಮ್ರಾನ್ ಷರೀಫ್, ಜಿನ್ ಷರೀಫ್ ಬಂಧಿತರು.

ನಿನ್ನೆ ರಾತ್ರಿ ಕುಡಿತದ ಅಮಲಿನಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಈ ಮೂವರನ್ನು ಬಂಧಿಸಲಾಗಿದೆ.

ಬೆಂಗಳೂರಿನ‌ ಹೆಬ್ಬಾಳ ಫ್ಲೈ ಓವರ್‌ ಬಳಿ ಫಯಾಜ್‌ ಗೆಳೆಯರು ತೆರಳುತ್ತಿದ್ದ ಕಾರನ್ನು ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ಫಯಾಜ್‌ ಮತ್ತು ಗೆಳೆಯರ ನಡುವೆ ವಾಗ್ವಾದ ನಡೆದಿದೆ. ನಂತರ ಫಯಾಜ್‌ ಹಾಗೂ ಆತನ ಗೆಳೆಯರು ಹೆಡ್‌ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!