Mysuru

ದಸರಾ ಆನೆಗಳ ತಂಡಕ್ಕೆ “ಅಶ್ವತ್ಥಾಮ’ನ ಪ್ರವೇಶ

ಈ ಬಾರಿಯ ಮೈಸೂರು ದಸರಾ ಆನೆಗಳ ಅರ್ಜುನ ನೇತೃತ್ವದ ತಂಡಕ್ಕೆ ಹೊಸ ಸದಸ್ಯನ ಸೇರ್ಪಡೆಯಾಗಿದೆ. ಅವನೇ “ಅಶ್ವತ್ಥಾಮ’. ಮಹಾಭಾರತದ ದ್ರೋಣಾಚಾರ್ಯರ ಮಗನ ಹಸರನ್ನೇ ಈ ಆನೆಗೆ ಇಡಲಾಗಿದೆ. ತಂಡದ ಹೊಸ ಆಕರ್ಷಣೆಯಾದ ಇವನ ಚರಿತ್ರೆಯೂ ಜೋರಾಗಿಯೇ ಇದೆ.


ನಾಲ್ಕು ವರ್ಷದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರದ ಸುತ್ತಮುತ್ತಲ️ ಕಾಡಿನಿಂದ ನಾಡಿನ ಸಮೀಪಕ್ಕೆ ಬಂದು ಸಾಕಷ್ಟು ಕಿರಿಕಿರಿ ಮಾಡುತ್ತಿತ್ತು ಈ ಪುಂಡಾನೆ. ಬೆಳೆದ ಬೆಳೆಗಳನ್ನು ತಿಂದು ತೇಗಿ ಹೋಗುತ್ತಿತ್ತು. ಗಾಬರಿಗೊಂಡಿದ್ದ ರೈತರು ಅರಣ್ಯ ಇಲಾಖೆಗೆ ದೂರುಗಳ ಸುರಿಮಳೆಗೈದಿದ್ದರು.


ಭಾರಿ ಗಾತ್ರದ, ಉದ್ದಯನ ದಂತ ಹೊಂದಿದ್ದ ಒಂಟಿ ಸಲ️ಗ ಇದು ಎಂಬ ಮಾಹಿತಿ ಅರಿತ ಅರಣ್ಯ ಇಲಾಖೆಯವರು ಕಾರ್ಯಾಚರಣೆ ಶುರುಮಾಡಿದರು. ಅಭಿಮನ್ಯು ನೇತೃತ್ವದಲ್ಲಿ ಅರ್ಜುನ ಸೇರಿ ಹಲ️ವು ಆನೆಗಳ ತಂಡದ ಸಹಾಯದೊಂದಿಗೆ ಈ ಒಂಟಿ ಸಲ️ಗನನ್ನು ಹಿಡಿಯುವಲ್ಲಿ ಯಶಸ್ವಿಯಾದರು.


ಆ ಅನೆಗೆ ಆಗ 30 ವರ್ಷ ವಯಸ್ಸು. ಇದನ್ನು ಪಳಗಿಸಿದರೆ ಭವಿಷ್ಯದಲ್ಲಿ ಅನುಕೂಲ️ಕ್ಕೆ ಬರಲಿದೆ ಎಂಬ ಯೋಚನೆ ಮೂಡಿದ್ದೇ ತಡೆ ಸ್ಥಳೀಯ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆದು ಹರವೆ ಆನೆ ತರಬೇತಿ ಶಿಬಿ️ರಕ್ಕೆ ಕರೆತಂದರು. ಅಶ್ವತ್ಥಾಮ ಎಂದು ನಾಮಕರಣವೂ ಆಯಿತು.

3,500 ಕೆ.ಜಿ. ತೂಕ, 2.85 ಮೀ.ಎತ್ತರ ಮತ್ತು 3.46 ಮೀಟರ್ ಉದ್ದದ ಈ ಆನೆ ಅಂದು ಉಗ್ರಸ್ವರೂಪಿ. ಕಾಲ️ಚಕ್ರ ಉರುಳಿದಂತೆ “ಅವನೂ’ ಬದಲಾದ ಸೌಮ್ಯ ಸ್ವರೂಪನಾಗಿ. ಈ ಕಾರ್ಯಾಚರಣೆ ನಡೆದು ನಾಲ್ಕು ವಷಗಳೇ ಕಳೆದಿವೆ.

ಸಮತಟ್ಟಾದ ಬೆನ್ನು ಇರುವ ಕಾರಣ ದಸರೆಗೆ ಆಯ್ಕೆ ಮಾಡಲಾಗಿದೆ. ಅಂಬಾರಿ ಕಟ್ಟಲು ಈ ರೀತಿಯ ಬೆನ್ನು ಹೇಳಿಮಾಡಿಸಿದಂತಿರುವುದರಿಂದ ಭವಿಷ್ಯದಲ್ಲಿ ಇವನಿಗೆ ಚಿನ್ನದ ಅಂಬಾರಿ ಹೊರುವ ಭಾಗ್ಯವೂ ಸಿಗಬಹುದೇನೊ ಎಂಬ ವಿಶ್ವಾಸ ಮೂಡಿದೆ.

ಮೈಸೂರು ದಸರಾಗೆ ಪ್ರವೇಶಮಾಡಲಿರುವ “ಅಶ್ವತ್ಥಾಮ’ನಿಗೆ ಮಾವುತ ಶಿವು, ಕಾವಾಡಿ ಗಣೇಶ್ ಆತ್ಮೀಯರು. ಇವರ ಮಾತನ್ನು ಮೀರುವುದಿಲ್ಲವೆಂಬ ಹೆಗ್ಗಳಿಕೆ “ಆತನ’ದು.

Team Newsnap
Leave a Comment
Share
Published by
Team Newsnap

Recent Posts

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024

ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More

May 16, 2024