January 28, 2026

Newsnap Kannada

The World at your finger tips!

muda

ಮುಡಾದಲ್ಲಿ ಮತ್ತೊಂದು ಭ್ರಷ್ಟಾಚಾರ ಬಯಲು: ಸರ್ಕಾರಕ್ಕೆ 300 ಕೋಟಿ ನಷ್ಟ!

Spread the love

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಮತ್ತೊಂದು ಭ್ರಷ್ಟಾಚಾರ ಬೆಳಕಿಗೆ ಬಂದಿದ್ದು, ಸರ್ಕಾರಕ್ಕೆ 300 ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ಈ ಹಗರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಹುಮೂಲ್ಯ ನಿವೇಶನಗಳನ್ನು ಕೇವಲ ತೂಕದ ದರದಲ್ಲಿ ಮಾರಾಟ ಮಾಡಿರುವ ಆರೋಪ ಮುಡಾದ ವಿರುದ್ಧ ಕೇಳಿಬಂದಿದೆ.

ಆರೋಪಗಳ ವಿವರ:
ಮೈಸೂರಿನ ವಿಜಯನಗರದಲ್ಲಿ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 23 ನಿವೇಶನಗಳನ್ನು ಕೇವಲ ₹3,000ಕ್ಕೆ ಮಾರಾಟ ಮಾಡಲಾಗಿದೆ. ಈ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ಮುಡಾದ ಮಾಜಿ ಆಯುಕ್ತ ದಿನೇಶ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಎನ್. ಮಂಜುನಾಥ್ ಅವರ ಹೆಸರನ್ನು ಈ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡವರಾಗಿ ಆರೋಪಿಸಲಾಗಿದೆ.

ಲೋಕಾಯುಕ್ತ ದೂರು:
ಈ ಹಗರಣದ ಕುರಿತು ಕೃಷ್ಣ ಎಂಬವರು ಮೈಸೂರಿನ ಲೋಕಾಯುಕ್ತಗೆ ಕಳೆದ ವರ್ಷವೇ ದೂರು ಸಲ್ಲಿಸಿದ್ದರು. ಮುಡಾದ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್, ವಿಶೇಷ ತಹಶೀಲ್ದಾರ್ ಶಿವಕುಮಾರ್, ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಶ್ರೀಮತಿ ಕಾವ್ಯ, ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಎನ್. ಮಂಜುನಾಥ್‌ ವಿರುದ್ಧ ದೂರು ದಾಖಲಾಗಿದೆ.

ಹಗರಣದ ಸ್ವರೂಪ:
ಮಂಜುನಾಥ್‌ ಅವರ ಕ್ರಯ ಪತ್ರದಲ್ಲಿ ಯಾವುದೇ ಭೂಮಿ ಕಳೆದುಕೊಂಡ ವಿವರಗಳಿಲ್ಲ. ಆದರೆ, “ಪ್ರೋತ್ಸಾಹದಾಯಕ” ಎಂಬ ಶೀರ್ಷಿಕೆಯಡಿ ನಿವೇಶನಗಳನ್ನು ಹಂಚಲಾಗಿದೆ. 5 ಲಕ್ಷ ರೂಪಾಯಿಯ ಶುಲ್ಕ ಪಾವತಿಸಬೇಕಾದ ಸ್ಥಳದಲ್ಲಿ ಕೇವಲ ₹600 ಪಾವತಿಸಿ ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಷ್ಟ ಮತ್ತು ಕ್ರಮಕ್ಕೆ ಒತ್ತಾಯ:
ಈ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದೆ.ಇದನ್ನು ಓದಿ –PDO ಹುದ್ದೆಗಳಿಗೆ ರಾಜ್ಯಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆ: ಅಭ್ಯರ್ಥಿಗಳಿಗೆ ಕಡ್ಡಾಯ ನಿಯಮಗಳು ಪ್ರಕಟ

ಇದೇ ಭ್ರಷ್ಟಾಚಾರದ ಮತ್ತಷ್ಟು ವಿವರಗಳು ಮುಂದಿನ ದಿನಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ.

error: Content is protected !!