ಕಳ್ಳತನದ ಆರೋಪ – ಅವಮಾನ ಸಹಿಸದ ಯುವಕ ಆತ್ಮಹತ್ಯೆ ಗೆ ಯತ್ನ

Team Newsnap
1 Min Read

ಯುವಕರ ಮೇಲೆ ಹಣ ಕಳ್ಳತನ ಮಾಡಿದ ಆರೋಪ ಮೇಲೆ ಮೂವರು ಯುವಕರ ತಲೆ ಬೋಳಿಸಿ ಅವಮಾನಿಸಿದ ಘಟನೆ ಮೈಸೂರು ಸಮೀಪದ ಬೀರುಹುಂಡಿಯಲ್ಲಿ ಜರುಗಿದೆ.

ಪೋಸ್ಟ್ ಆಫೀಸ್ ಸಿಬ್ಬಂದಿ ಈ ಕೃತ್ಯ ನಡೆಸಿದ್ದಾರೆಂದು ಹೇಳಲಾಗಿದೆ.

ಅವಮಾನ ತಾಳಲಾರದೆ ಯುವಕ ಕುಮಾರ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ
ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ತಲೆಬೋಳಿಸಿಕೊಂಡ ಅವಮಾನ ತಾಳಲಾರದೇ ಮತ್ತಿಬ್ಬರು ಯುವಕರು ನಾಪತ್ತೆಯಾಗಿದ್ದಾರೆ.

ಬೀರುಹುಂಡಿ ಪೋಸ್ಟ್ ಆಫೀಸ್ ಸಿಬ್ಬಂದಿ ರಾಣಿ ಹಾಗೂ ಗ್ರಾ.ಪಂ. ಕಚೇರಿ ಸಿಬ್ಬಂದಿ ಸ್ವಾಮಿಯಿಂದ ಯುವಕರ ತಲೆ ಬೋಳಿಸಿ ಕೃತ್ಯ ನಡೆಸಿದ್ದಾರೆ ಎಂದು ದೂರಲಾಗಿದೆ.

ಯುವಕರ ಪರ ಜಾತ್ಯತೀತ ಮಹಿಳಾ ರಕ್ಷಣಾ ವೇದಿಕೆ ಹಾಗೂ ಲಕ್ಷ್ಮಿ ಚಾರಿಟಬಲ್ ಟ್ರಸ್ಟಿನ ಸದಸ್ಯರು ಪ್ರತಿಭಟನೆ ನಡೆಸಿದರು. ನಂತರ
ರತ್ನ ಮತ್ತು ರಾಣಿಗೌಡರಿಂದ ಜಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು‌ ಇದುವರೆಗೂ ದೂರು ಮಾತ್ರ ದಾಖಲಿಸಿಕೊಂಡಿಲ್ಲ.

Share This Article
Leave a comment