ಕೊಲ್ಲಲೇ ಬೇಕಿತ್ತು ಆ ಸಂಬಂಧವನ್ನು,
ನನಗಾಗಿ ನಿನಗಾಗಿ ನಮಗಾಗಿ,
ಇಲ್ಲದಿದ್ದರೆ ಸಂಬಂಧವೇ ಕೊಲ್ಲುತ್ತಿತ್ತು ನಮ್ಮನ್ನು,
ಅದು ಪಾಪವೂ ಅಲ್ಲ,
ಪ್ರಾಯಶ್ಚಿತ್ತವೂ ಅಲ್ಲ,
ಬದುಕಿನ ಸಹಜ ಪಯಣ.
ಪ್ರೀತಿಯೇ ಅತ್ತಾಗ – ಮೌಲ್ಯವೇ ಸತ್ತಾಗ,
ಸಂಬಂಧವೇ ವಿಷವಾಗುತ್ತದೆ.
ಭಾವನೆಯೇ ಬರಿದಾದಾಗ,
ಮನಸ್ಸೇ ಕಲ್ಲಾದಾಗ,
ಸಂಬಂಧವೇ ಇರಿಯುತ್ತದೆ.
ಬದುಕಿಕಾಗಿ ಸಂಬಂಧವೇ ಹೊರತು,
ಸಂಬಂಧಕ್ಕಾಗಿ ಬದುಕಲ್ಲಾ,
ನೆಮ್ಮದಿಗಾಗಿ ಸಂಬಂಧವೇ ಹೊರತು,
ಸಂಬಂಧದಿಂದ ಕ್ಷೋಭೆ ತರವಲ್ಲ.
ಬದಲಾಗುತ್ತಿದೆ ಪ್ರೀತಿಯ ಅರ್ಥಗಳು,
ಬದಲಾಗುತ್ತಿದೆ ನಮ್ಮ ಪಾತ್ರಗಳು,
ಬರಿದಾಗುತ್ತಿವೆ ನಮ್ಮ ಸಂಬಂಧಗಳು,
ಹೊಮ್ಮಿಸುತ್ತಿವೆ ಹೊಸ ಹೊಸ ಆಲೋಚನಗಳು,
ಚಿಮ್ಮಿಸುತ್ತಿವೆ ಬೇರೆ ಬೇರೆ ಕನಸುಗಳು,
ಒಳ್ಳೆಯದೋ ಕೆಟ್ಟದ್ದೋ ,
ಒತ್ತಡಕ್ಕೊಳಗಾಗಿದೆ ಸಂಬಂಧಗಳು,
ಕುಸಿಯುತ್ತಿದೆ ಅನುಬಂಧಗಳು,
ಆಗೊಮ್ಮೆ ಜ್ವಾಲಾಮುಖಿ,
ಒಮ್ಮೊಮ್ಮೆ ಭೂಕಂಪ,
ಮತ್ತೊಮ್ಮೆ ಸುನಾಮಿ,
ಉಳಿಯುವುದೆಲ್ಲಿ ಸಂಬಂಧ,
ಅಗ್ನಿ ಸಾಕ್ಷಿ ಆರಿತು,
ಮನಸ್ಸಾಕ್ಷಿ ಮುರಿಯಿತು,
ಸಂಬಂಧ ಕಮರಿತು.
ಅದಕ್ಕಾಗಿಯೇ ಹೇಳಿದ್ದು,
ಕೊಲ್ಲಲೇ ಬೇಕಿತ್ತು ಸಂಬಂಧವನ್ನು,
ಇಲ್ಲದಿದ್ದರೆ ಸಂಬಂಧವೇ ಕೊಲ್ಲುತ್ತಿತ್ತು.
ಅದಕ್ಕಾಗಿ ವಿಷಾದವಿಲ್ಲ,
ಬರುವುದೂ ಒಂಟಿಯಾಗಿ,
ಹೋಗುವುದೂ ಒಂಟಿಯಾಗಿ,
ನೀನು ನೀನೆ – ನಾನು ನಾನೇ,
ಸೃಷ್ಟಿಯ ಕೂಸುಗಳು,
ಅದೇ ನಿಜವಾದ ಸಂಬಂಧ…
ಆಪಾದನೆಗಳು ಆರೋಪಗಳು ಕೋರ್ಟು ಕಚೇರಿಗಳ ಗೊಂದಲವೇ ಬೇಡ.
ನಿನ್ನ ಇಷ್ಟ ನಿನಗೆ,
ನನ್ನ ಸ್ವಾತಂತ್ರ್ಯ ನನಗೆ.
ಮತ್ಯಾರೋ ಮೂಗು ತೂರಿಸುವುದು,
ಇನ್ನಷ್ಟು ಕಸಿವಿಸಿ ಯಾಕೆ ಬೇಕು.
ಇರುವ ನಾಲ್ಕು ದಿನಕ್ಕೆ.
ಉಳಿಸಿಕೊಂಡವರಿಗೆ ಅಭಿನಂದನೆಗಳು,
ಕಳೆದುಕೊಂಡವರಿಗೆ ಧನ್ಯವಾದಗಳು,
ಆದರೆಲ್ಲರಿಗೂ ಸ್ವಾಗತ,
ಅದು ಕೂಡ ಸಂಬಂಧವೇ…….
ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More
ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್… Read More
ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
This website uses cookies.
Leave a Comment