Main News

ಫೆ. 3 ರಿಂದ 5 ರವರೆಗೆ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ

ಫೆ.3 ರಿಂದ 5 ರ ವರೆಗೆ ಮೂರು ದಿನಗಳ ಕಾಲ ಲೋಹದ ಹಕ್ಕಿಗಳ (ಏರ್ ಶೋ) ವೈಮಾನಿಕ ಪ್ರದರ್ಶನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.

ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನಕ್ಕಾಗಿ ಕೈಗೊಂಡಿರುವ ಪೂರ್ವಸಿದ್ಧತೆಗಳ ಕುರಿತು ವಾಯುಪಡೆಯ ಏರ್ ಆಫೀಸರ್ ಕಮಾಂಡರ್ ಶೈಲೇಂದ್ರ ಸೂದ್ ಮತ್ತಿತರ ಹಿರಿಯ ಅಧಿಕಾರಿಗಳು
ಸುದ್ದಿಗಾರರಿಗೆ ಈ ಕುರಿತಂತೆ ಮಾಹಿತಿ ನೀಡಿದರು.

ವೈಮಾನಿಕ ಪ್ರದರ್ಶನಕ್ಕೆ ಸಿದ್ದತೆ ಗಳು ಏನು? :
  • ಪ್ರದರ್ಶನದ ವೇಳೆ ಅಗತ್ಯ ತುರ್ತು ಚಿಕಿತ್ಸೆ, ವೈದ್ಯೋಪಚಾರ, ವಿಪತ್ತು ನಿರ್ವಹಣೆ, ವೈಮಾನಿಕ ಅಪಾಯ, ಅನುಮಾನಾಸ್ಪದ ದ್ರೋಣ್ ಹಾರಾಟ ತಡೆಗಟ್ಟುವಿಕೆ ಸೇರಿದಂತೆ ಮತ್ತಿತರ ಪರಿಸ್ಥಿತಿ ಎದುರಿಸಲು ತಯಾರಿ.
  • ನೆಲಮಟ್ಟದಲ್ಲಿ ಶಸ್ತ್ರಸಜ್ಜಿತ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು. ಯಲಹಂಕ ವಾಯುನೆಲೆಯಲ್ಲಿ ಮೂರು ಹಂತದ ಭದ್ರತೆ ಇರುತ್ತದೆ.
  • ಕಳೆದ ಬಾರಿಯಂತೆ ಅಗ್ನಿ ಅವಘಡ ಸಂಭವಿಸಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
  • ವಾಹನ ನಿಲ್ದಾಣದಲ್ಲಿ ಹುಲ್ಲು ಬೆಳೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಆ ಜಾಗವನ್ನು ಸಮತಟ್ಟು ಮಾಡಲಾಗಿದೆ ಯಾವುದೇ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಸೂರ್ಯಕಿರಣ್ – ಸಾರಂಗ್ ಜೋಡಿ ಪ್ರದರ್ಶನ :
  • ಭಾರತೀಯ ಸೇನೆಯ ಸೂರ್ಯಕಿರಣ ಹಾಗೂ ಸಾರಂಗ್ ಜೊತೆಯಾಗಿ ಪ್ರಥಮ ಬಾರಿಗೆ ವೈಮಾನಿಕ ಪ್ರದರ್ಶನ ನೀಡಲಿದೆ. ಚಿನೂಕ್ ಹೆಲಿಕಾಪ್ಟರ್ ಮೊದಲ ಬಾರಿಗೆ ಏರ್ ಶೋ‌ನಲ್ಲಿ ಪಾಲ್ಗೊಳ್ಳತ್ತಿದೆ. ಡಕೊಟಾ, ಲಘು ಯುದ್ಧ ವಿಮಾನ, ಸುಖೋಯ್-30 ಸೇರಿದಂತೆ ವೈಮಾನಿಕ ಕಸರತ್ತು ನೀಡಲಿದೆ. ವಿದೇಶಿ ವಿಮಾನಗಳ ಹಾರಾಟವನ್ನು ನಿರೀಕ್ಷಿಸಲಾಗಿದೆ. 42 ವಿಮಾನಗಳ ಪ್ರದರ್ಶನ.:
  • 13ನೇ ಆವೃತ್ತಿಯ ಏರ್ ಶೋ- 2021ನಲ್ಲಿ 42 ವಿಮಾನಗಳು ಸ್ಥಿರ ಪ್ರದರ್ಶನದಲ್ಲಿ ಇರುತ್ತವೆ.
  • ಫೆ.3 ರ ಉದ್ಘಾಟನಾ ದಿನದಂದು ಎಲ್ ಸಿಎ, ಹಾಕ್, ರಫಾಲ್, ಎಲ್ ಯುಎಚ್, ಜಾಗ್ವಾರ್ ಸೇರಿದಂತೆ 41 ವಿಮಾನಗಳು ವೈಮಾನಿಕ ಹಾರಾಟ ನಡೆಸಲಿದೆ.
  • ವೈಮಾನಿಕ ಕಸರತ್ತು ಪ್ರತಿದಿನ ಬೆಳಿಗ್ಗೆ 9 ರಿಂದ 12 ಗಂಟೆ ತನಕ ಹಾಗೂ ಮಧ್ಯಾಹ್ನ 2 ರಿಂದ 5 ರ ತನಕ ಇರಲಿದೆ.
ಏರ್ ಶೋ ಪ್ರವೇಶಕ್ಕೆ ಮಿತಿ :
  • 13ನೇ ಆವೃತ್ತಿಯಲ್ಲಿ ಏರ್ ಶೋ ಸ್ಥಿರ ಪ್ರದರ್ಶನಕ್ಕೆ ಪ್ರತಿದಿನದ ಪ್ರವೇಶ ಮಿತಿ 15,000 ಹಾಗೂ ವಾಯು ಪ್ರದರ್ಶನ ಜಾಗಕ್ಕೆ ಕೇವಲ 3,000 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ಸಾಮಾನ್ಯ ಜನರು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ 500 ರೂ. ನೀಡಿ ಇ- ಟಿಕೇಟ್ ಪಡೆದು ಏರ್ ಶೋ ಉದ್ಘಾಟನಾ ದಿನ ಮಧ್ಯಾಹ್ನ 1 ಗಂಟೆಯಿಂದ ಮತ್ತು ಪ್ರತಿದಿನ (ಫೆ.5ರ ತನಕ) ಬೆಳಗ್ಗೆ 9 ಗಂಟೆ ವೈಮಾನಿಕ ಪ್ರದರ್ಶನ ನಡೆಯುವ ಸ್ಥಳಕ್ಕೆ ಆಗಮಿಸಬಹುದು.

Team Newsnap
Leave a Comment
Share
Published by
Team Newsnap

Recent Posts

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024

ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More

May 16, 2024

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್‌ಐಎ

ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)… Read More

May 15, 2024

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ

ಹುಬ್ಬಳ್ಳಿ : ಇಂದು ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿರುವ ಘಟನೆ… Read More

May 15, 2024