ಮಾಡೆಲ್ ಲೋಕದ ದಿಗ್ಗಜರ ಜಾಹೀರಾತುಗಳು………
ಓ ,
ಹಾಲು ಬಿಳುಪಿನ ಸುರಸುಂದರಾಂಗಿಣಿಯೇ,
ಹಾಯ್,
ಚೆಲುವಾಂತ ಚೆನ್ನಿಗ ಮನ್ಮಥನೇ,
Fair & Lovely – Fair & Handsome ಮುಂತಾದ Beauty ಜಾಹೀರಾತುಗಳ ಸಪ್ತಲೋಕದಲ್ಲೂ ಮಿಂಚುವ ಮಾಡಲ್ ಗಳೇ,
ನಿಮ್ಮ ಸೌಂದರ್ಯಕ್ಕೆ – ಅದೃಷ್ಟಕ್ಕೆ ಅಭಿನಂದನೆಗಳು.
ಆ Product ಗಳ Brand Ambassador ಆಗಿರುವುಕ್ಕೆ ಸಂತೋಷ.
ಆದರೆ,……
ಪಕ್ಕದ ಮನೆಯ ಆ ಕಪ್ಪಗಿನ ಹುಡುಗಿಯೊಬ್ಬಳು,
ಈ ನೆಲದಲ್ಲಿ ಹುಟ್ಟಿರುವುದಕ್ಕೆ,
ತನ್ನ ನಿಯಂತ್ರಣದಲ್ಲಿಲ್ಲದ ದೇಹದ ಬಣ್ಣದ ಕಾರಣಕ್ಕಾಗಿ ತನ್ನೊಳಗೇ ಕೊರಗುತ್ತಿದ್ದಾಳೆ,
ಮೊದಲು ಅವಳಿಗೆ ಹೇಳಿ,
” ಬಣ್ಣಗಳಲ್ಲಿ ಯಾವುದು ಶ್ರೇಷ್ಠ ಎಂದು “
ಆಕರ್ಷಕ ದೇಹದ ಮಾಡಲ್ ಲೋಕದ ದೇವಾನು ದೇವತೆಗಳೇ ,
ಸೂಟು ಬೂಟಿನ ಮಿರಿಮಿರಿ ಮಿಂಚುವ ಬಟ್ಟೆಗಳ ದಿಗ್ಗಜರೇ…..
ರೈಲು ನಿಲ್ದಾಣದ ಆ ಕಲ್ಲು ಬೆಂಚಿನ ಮೇಲೆ ಅರೆ ಬಟ್ಟೆಯಲ್ಲಿ ಮಲಗಿರುವ ನಮ್ಮದೇ ಕಂದಮ್ಮಗಳಿಗೆ ಒಮ್ಮೆ ತಿಳಿ ಹೇಳಿ,
ಅವರ ಬದುಕಿನ Brand ambassador ಯಾರೆಂದು….
Shampoo – Soap – Perfume ಗಳ ಘಮಲುಗಳಲ್ಲಿ ಮುಳುಗೇಳುವ ರಾಜಕುಮಾರ ರಾಜಕುಮಾರಿಯರೇ,
ನಮ್ಮ ಹಳ್ಳಿಯ ಅಜ್ಜಿಯ ಹೇನು ಬಿದ್ದ ತಲೆಯ ಕೆರೆತ ಕಡಿಮೆಯಾಗಲು ಏನು ಮಾಡಬೇಕೆಂದು ಸ್ವಲ್ಪ ಹೇಳಿ.
ಅದಕ್ಕೂ ಪ್ರಚಾರ ರಾಯಭಾರಿಗಳಾಗುವಿರೇ .?
ಚಿನ್ನ ವಜ್ರ ಮುಂತಾದ ಒಡವೆಗಳ ರಾಯಭಾರಿಗಳೇ,
ಅಪ್ಸರೆಯರೇ,
ವಿಧವೆಯರಿಗೆ ಮಾಸಾಶನ ಅರ್ಜಿ ಎಲ್ಲಿ ಸಿಗುತ್ತದೆ , ಅದನ್ನು ಭರ್ತಿ ಮಾಡುವುದು ಹೇಗೆ ಸ್ವಲ್ಪ ತಿಳಿಸಿಕೊಡಿ.
ಅವರಿಗಾರು Brand ambassador ಗಳು.
ಏಕೆಂದರೆ ಅವರೂ ಇದೇ ನೆಲದಲ್ಲಿ ಹುಟ್ಟಿದ್ದಾರೆ. ನಿಮ್ಮಂತೆಯೇ ಗಂಡು ಹೆಣ್ಣಿನ ಮಿಲನದ ಕೂಸುಗಳು . ನಿಮ್ಮ ಹತ್ತುಪಟ್ಟು ಶಕ್ತಿ ಸಾಮರ್ಥ್ಯ ಶ್ರಮ ಪ್ರಾಮಾಣಿಕತೆ ಅವರಿಗಿದೆ.
ಆದರೆ….
ನಿಮ್ಮಂತ ಮುಖವಾಡಗಳಿಲ್ಲ.
ಅವರು ಕೇವಲ ಮನುಷ್ಯ ಜೀವಿಗಳು.
ಕಪಟ ಅರಿಯದ ಸೃಷ್ಟಿಯ ಕೂಸುಗಳು.
ಶ್ರೀಮಂತರ ಅವಶ್ಯಕತೆಗಳನ್ನು ಪೂರೈಸಲು ಎಲ್ಲಾ ವ್ಯವಸ್ಥೆಗಳು ಇವೆ.
ಆದರೆ ಸಂಕಷ್ಟದ ಜನರ ನೋವುಗಳನ್ನು ಆಲಿಸಲು ಇರುವುದಾದರೂ ಯಾರು ?
ಆಧುನಿಕ ಸಮಾಜದ ವಿಕೃತಿಗೆ ಅನೇಕ ಉದಾಹಾರಣೆಗಳಿವೆ. ಆದರೆ ಸಮ ಸಮಾಜದ ನಿರ್ಮಾಣಕ್ಕೆ ಇರುವ ಮಾರ್ಗಗಳು ತೋಚುತ್ತಿಲ್ಲ…….
ಜಾಹೀರಾತುಗಳಲ್ಲಿ ಸಹ ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಿದರೆ ಎಷ್ಟೊಂದು ಉಪಯುಕ್ತ ಅಲ್ಲವೇ…….
ಹುಚ್ಚು ಕನಸೆಂದು ನಗುವ ಸ್ವಾತಂತ್ರ್ಯ ನಿಮಗಿದೆ..
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment