February 24, 2026

Newsnap Kannada

The World at your finger tips!

pranith

ಕನ್ಹಯ್ಯ ಹತ್ಯೆ ಖಂಡಿಸಿ ‘ಹಿಂದೂ ಲೈವ್ಸ್‌ ಮ್ಯಾಟರ್‌’ ಎಂದು ನಟಿ ಪ್ರಣಿತಾ ಪೋಸ್ಟ್‌

Spread the love

ಕನ್ಹಯ್ಯ ಹತ್ಯೆ ಖಂಡಿಸಿ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಕರುನಾಡಿನಲ್ಲೂ ಪ್ರೊಟೆಸ್ಟ್‌ ಜತೆಗೆ ಆಕ್ರೋಶ ಹೆಚ್ಚಾಗುತ್ತಿದೆ. ಇದೀಗ ಸ್ಟಾರ್‌ ಸೆಲೆಬ್ರಿಟಿಗಳೂ ಕನ್ಹಯ್ಯ ಹತ್ಯೆ ಖಂಡಿಸಿ ಪ್ಲೆಕ್ಸ್‌ಗಳನ್ನು ಹಿಡಿದುಕೊಂಡು ಪೋಸ್ಟ್‌ ಹಾಕುವ ಮೂಲಕ ಕಿಡಿಕಾರಿದ್ದಾರೆ.

ನಟಿ ಪ್ರಣಿತಾ ʻ ಹಿಂದೂ ಲೈವ್ಸ್‌ ಮ್ಯಾಟರ್‌ ʼ ಅಂತಾ ಪೋಸ್ಟ್‌ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಬೀಟೌನ್‌ ಸಿಂಗರ್‌ ವಿಶಾಲ್‌ ದದ್ಲಾನಿ ಕೂಡಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಹಿರಿಯ ನಟ ಅನುಪಮ್ ಖೇರ್, ನಿರ್ದೇಶಕ ಅಶೋಕ ಪಂಡಿತ್ ಸೇರಿದಂತೆ ಚಲನಚಿತ್ರ ನಟ ನಟಿಯರು ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೈಲರ್ ಕನ್ಹಯ್ಯ ಹತ್ಯೆ ಪ್ರಕರಣ ಖಂಡಿಸಿ ಸರ್ಕಾರವನ್ನು ಎಚ್ಚರಿಸಿದ ಪೇಜಾವರ ಶ್ರೀಗಳು 

ನಟ ಅನುಪಮ್ ಖೇರ್ ಕೂಡ ಉದಯಪುರ ಹತ್ಯೆಯನ್ನು ಖಂಡಿಸಿ ಟ್ವಿಟ್ಟರ್ ನಲ್ಲಿ ಪೋಸ್ಟ್‌ ಹಾಕಿದ್ದಾರೆ, ‘ಭಯಭೀತರಾದ… ದುಃಖದ… ಸಿಟ್ಟು…! #KanhaiyaLal.’ ಈ ಬಗ್ಗೆ ಟ್ವೀಟ್ ಮಾಡಿರುವ ಚಲನಚಿತ್ರ ನಿರ್ಮಾಪಕ ಅಶೋಕ ಪಂಡಿತ್, ‘ಇದು ಹಿಂದೂ ‘ದರ್ಜಿ’ಯ ಕೊಲೆಯಲ್ಲ, ಬದಲಾಗಿ ಹಿಂದೂಗಳ ಹತ್ಯೆಗಳ ‘ಟ್ರೈಲರ್’ ಆಗಿದೆ. ಎಂದು ಬರೆದುಕೊಂಡಿದ್ದಾರೆ.

error: Content is protected !!