ತೆಲುಗಿನ ನಟನೊಬ್ಬ ಜಯಂತಿಗೆ ಕಪಾಳ ಮೋಕ್ಷ ಮಾಡಿದ ಘಟನೆಯನ್ನು ಹಿರಿಯ ನಟಿ ಲಕ್ಷ್ಮೀ ನೆನಪಿಸಿಕೊಂಡರು.
ಜಯಂತಿ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಲಕ್ಷ್ಮೀ
ಜಯಂತಿಗೆ ತಾಳ್ಮೆ ಜಾಸ್ತಿ ಇತ್ತು. ಎಂದಿಗೂ ಕೋಪ ಮಾಡಿಕೊಂಡವರಲ್ಲ.
ಒಂದು ಘಟನೆ ನನಗೆ ಇನ್ನೂ ನೆನಪಿದೆ. ತೆಲುಗು ಸಿನಿಮಾದ ಶೂಟಿಂಗ್ ಒಂದನ್ನು ಮುಗಿಸಿ ಅವರು ಬೆಂಗಳೂರಿಗೆ ಬರ್ಬೇಕಿತ್ತು.
ಊಟದ ವೇಳೆ ಇಬ್ಬರೂ ಮೀಟ್ ಮಾಡಿದ್ವಿ. ಇನ್ನೊಂದು ಸಿನಿಮಾ ಶೂಟ್ಗೆ ಹೋಗಬೇಕು.. ಹೀರೋ, ನಿರ್ಮಾಪಕಗೆ ತುಂಬಾ ಕೋಪ ಏನು ಮಾಡೋದು ಎಂದರು.
ಅದು ಕ್ಲೈಮ್ಯಾಕ್ಸ್ ಶೂಟ್ ಅಲ್ವಾ.. ಇವರಿಗೆ ಹೇಳಿ ಹೊರಡಿ ಎಂದು ಹೇಳಿದ್ದೆ. ನಾನು ಆತನ ಹೆಸರು ಹೇಳೋದಿಲ್ಲ. ಕೆಲವು ಹೊತ್ತಿನಲ್ಲೇ ಆತ ಬಂದು ಜಯಂತಿ ಅಮ್ಮನಿಗೆ ಹೊಡೆದುಬಿಟ್ಟಿದ್ದಾರೆ ಅಂತ ನನಗೆ ಹೇಳಿದರು ನನಗಿಂತಲೂ ಚಿಕ್ಕವಯಸ್ಸಿನವನು ಅಂತ ಜಯಂತಿ ಅಮ್ಮ ಸುಮ್ಮನಾಗಿಬಿಟ್ಟರು.
ಜಯಂತಿ ಜೀವನದಲ್ಲಿ ಅಷ್ಟಾಗಿ ಖುಷಿಯಾಗಿರಲಿಲ್ಲ.. ಒಳಗೆ ಅಗಾಧವಾದ ದುಃಖವನ್ನು ಇಟ್ಟುಕೊಂಡಿದ್ದರು. ಹೋಗುವಾಗಲೂ ಹೇಳದೇ ಹೊರಟುಹೋದರು ಎಂದು ನಟಿ ಲಕ್ಷ್ಮೀ ಬೇಸರದಿಂದ ಹೇಳಿದರು.
- ರೇವಣ್ಣ ರಿಲೀಸ್ : ಬಿಗ್ ರಿಲೀಪ್
- ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್
- CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್
- ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ