Main News

ನಟಿ ಕಂಗನಾ ರಣಾವತ್ ಬಂಗಲೆ ಅನಧಿಕೃತ ಭಾಗ ತೆರವಿಗೆ ತಡೆ ನೀಡಿದ ಕೋಟ್೯

ನ್ಯೂಸ್ ಸ್ನ್ಯಾಪ್
ಮುಂಬೈ,

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಬಂಗಲೆಯ ಸ್ವಲ್ಪ ಭಾಗವನ್ನು ಅನಧಿಕೃತವಾಗಿ ನಿರ್ಮಿಸಿರುವ ಕಾರಣಕ್ಕಾಗಿ ಎಂದು ಹೇಳಿ ತೆರವು ಮಾಡಲು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ (ಬಿ ಎಮ್ ಸಿ) ನ ಅಧಿಕಾರಿಗಳು ಮುಂದಾಗಿರುವ ಘಟನೆ ಇಂದು ನಡೆದಿದೆ.

ನಡೆದಿದ್ದು ಏನು?
ಬಂಗಲೆಯ ಅನಧಿಕೃತ ಭಾಗವನ್ನು ತೆರವು ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬಿ.ಎಮ್.ಸಿ. ಯ ಕಾರ್ಯನಿರ್ವಾಹಕ ಇಂಜಿನಿಯರ್” ಕಂಗನಾ ಅವರ ಬಂಗಲೆಯ ಅನಧಿಕೃತ ಭಾಗದ ಬಗ್ಗೆ ವಿವರಣೆ, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಲು ಕೋರಿದ್ದೆವು. ಆದರೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ ಅವರಿಗೆ ನಾವು ಇನ್ನು 24 ಗಂಟೆಗಳಲ್ಲಿ‌ ಅನಧಿಕೃತ ಕೆಲಸಗಳನ್ನು ನಿಲ್ಲಿಸಬೇಕೆಂದು ನೋಟಿಸ್ ಸಹ ನೀಡಿದ್ದೆವು. ಆದರೆ ಕಂಗನಾ ಅವರಾಗಲಿ, ಬಂಗಲೆಯ ಇತರೆ ಸಿಬ್ಬಂದಿಗಳಾಗಲೀ ಸರಿಯಾಗಿ ಸ್ಪಂದಿಸದೇ ಇದ್ದುದರಿಂದ ನಾವು ನೋಟಿಸ್ ನ‌ ಪ್ರತಿಯನ್ನು ಅವರ ಬಂಗಲೆಯ ಗೇಟ್ ಗೆ ಅಂಟಿಸಿದೆವು” ಎಂದು ಹೇಳಿದರು.

ಬಿ. ಎಮ್. ಸಿ. ಯವರ ನಡೆಯನ್ನು ಖಂಡಿಸಿರುವ ಕಂಗನಾ ” ಶಿವಸೇನೆಯ ವಿರುದ್ಧ ಮಾತನಾಡಿದ್ದಕ್ಕೆ ಮಹಾರಾಷ್ಟ್ರ ಸರ್ಕಾರ ತಮ್ಮನ್ನು ಈ ರೀತಿ ಗುರಿಯಾಗಿಸಿದೆ” ಎಂದು ದೂರಿದ್ದಾರೆ. ಈ ಮೊದಲು “ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತಾಗಿದೆ. ಇಲ್ಲಿರಲು ಭಯವಾಗುತ್ತದೆ. ಮುಂಬೈ ಪೋಲಿಸರ ಮೇಲೆ ನಂಬಿಕೆಯಿಲ್ಲ’ ಎಂಬ ಹೇಳಿಕೆಯು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯ ನಂತರ ಅವರಿಗೆ ಜೀವ ಬೆದರಿಕೆ ಬಂದಿದ್ದರಿಂದ ಕೇಂದ್ರ ಗೃಹ ಇಲಾಖೆಯು ಅವರಿಗೆ ವೈ + ಭದ್ರತೆನ್ನೂ ನೀಡಿತ್ತು.

ಘಟನೆಯ ಬಗ್ಗೆ ಟ್ವಿಟರ್ ನಲ್ಲಿ‌ ಪ್ರತಿಕ್ರಿಯಿಸಿರುವ ಕಂಗನಾ ಪಾಕಿಸ್ತಾನ್’ ಎಂದು ಸಂಬೋಧಿಸಿರುವದರ ಜೊತೆಗೆ ‘ನಾನೇನು ತಪ್ಪು ಮಾಡಿಲ್ಲ. ಈ ರೀತಿ ವರ್ತಿಸಿ ನನ್ನ ಶತ್ರುಗಳು ಏಕೆ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಪದೇ ಪದೇ ಸಾಬೀತು‌ಮಾಡುತ್ತಿದ್ದಾರೆ’ ಎಂದು ಪೋಸ್ಟ್ ಮಾಡಿದ್ದಾರೆ. ಮುಂಬಯಿಯ ಮುನ್ಸಿಪಾಲ್ ಸಿಬ್ಬಂದಿಗಳ ಚಿತ್ರವೊಂದನ್ನ ಹಾಕಿ ಅದಕ್ಕೆ ‘ಬಾಬರ್ ಮತ್ತು ಅವನ ಸೇನೆ’ ಎಂದೂ ಹೆಸರಿಸಿದ್ದಾರೆ. ಟ್ವಿಟರ್ ನ ಪೋಸ್ಟ್ ಗೆ ಹ್ಯಾಶ್ ಟ್ಯಾಗ್ ಬಳಸಿ #Death of democracy ಎಂದು ನಮೂದಿಸಿದ್ದಾರೆ.

ಈ ಪ್ರಕರಣ ಕುರಿತಂತೆ ಇಂದು ಬೆಳಿಗ್ಗೆ ಕಂಗನಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಹೈಕೋರ್ಟ್ ಇಂದು ಮಧ್ಯಾಹ್ನ ಬಂಗಲೆಯ ಅನಧಿಕೃತ ಭಾಗವನ್ನು ತೆರವುಗೊಳಿಸುವುದಕ್ಕೆ ತಡೆಯಾಜ್ಞೆ ನೀಡಿದೆ.

Team Newsnap
Leave a Comment
Share
Published by
Team Newsnap

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024