ಹಲಗೂರು ಸಮೀಪದ ಲಂಬಾಣಿ ಹೊಸದೊಡ್ಡಿ ಹಾಗೂ ಕೃಷ್ಣೇ ಗೌಡನ ದೊಡ್ಡಿ ಮಾರ್ಗ ಮಧ್ಯೆ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ಜರುಗಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ಸಾತನೂರು ಹೋಬಳಿಯ ಕಬ್ಬಾಳು ಗ್ರಾಮದ ವೀರಭದ್ರ ಗೌಡರ ಪತ್ನಿ ನಾಗಮ್ಮ (45) ಎಂಬುವವರು ಮೃತ ಪಟ್ಟ ದುರ್ದೈವಿ.
ಕಾರಿನಲ್ಲಿದ್ದ ಕನಕಪುರ ತಾಲ್ಲೂಕು ಮಲ್ಲಪುರ ಗ್ರಾಮದ ಕುಮಾರ್(27),ಸುಮಿತ್ರ (37), ಸುಜಾತ (30),ಪುಷ್ಪ(25),ಪೂಜಾ(18), ಕೆಂಪಮ್ಮ(47) ಇಬ್ಬರು ಮಕ್ಕಳಾದ ನಕ್ಷತ್ರ(02) ,ಆಯುಷ್,(04) ಗಂಭೀರ ಗಾಯಗೊಂಡವರನ್ನು ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ
ಸಮೀಪದ ಮುತ್ತತ್ತಿಯಲ್ಲಿ ಬೀಗರ ಔತಣಕೂಟ ಮುಗಿಸಿ ವಾಪಸ್ಸು ಲಂಬಾಣಿ ಹೊಸ ದೊಡ್ಡಿ ಮತ್ತು ಕೃಷ್ಣೇಗೌಡನ ದೊಡ್ಡಿಯ ಮಾರ್ಗ ಮಧ್ಯೆ ಕಾರಿನ ಹಿಂಭಾಗದ ಚಕ್ರ ಸಿಡಿದು ಈ ಘಟನೆ ಸಂಭವಿಸಿದೆ .
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ
- ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ