ಮೊಬೈಲ್ ಕಳ್ಳರಿಂದಲೇ ಲಕ್ಷ ರು ಲಂಚ ಸ್ವೀಕಾರ : ಎಸ್ ಐ ಸೌಮ್ಯ, ಇಬ್ಬರು ಪೇದೆಗಳು ಎಸಿಬಿ ಬಲೆಗೆ

Team Newsnap
1 Min Read

ಮೊಬೈಲ್ ಕಳ್ಳರಿಂದ 1 ಲಕ್ಷ ರು ಲಂಚ ಸ್ವೀಕರಿಸುವ ಮುನ್ನ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೋಲಿಸ್ ಠಾಣೆಯ ಎಸ್ ಐ ಸೌಮ್ಯ ಹಾಗೂ ಮುಖ್ಯ ಪೇದೆ ಜೆ ಪಿ ರೆಡ್ಡಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

acp

ಲಂಚ ಸ್ವೀಕರಿಸುವ ವೇಳೆ ಎಸಿಬಿ ದಾಳಿ ಮಾಡಿದ್ದರಿಂದ ಪೇದೆ ಕುಮಾರ್ ಎಂಬಾತ ತಪ್ಪಿಸಿಕೊಳ್ಳಲು ಓಡಿ ಹೋಗಿದ್ದಾನೆ. ಈ ವೇಳೆ ಪೇದೆ ಕುಮಾರ್ ಕಾಲು ಮುರಿದುಕೊಂಡಿದ್ದಾನೆ.

ಕಳ್ಳರಿಂದಲೇ 1 ಲಕ್ಷ ರು ಲಂಚ ಕೇಳಿದ್ದು ನಿಜ ಎಂದು ಒಪ್ಪಿಕೊಂಡು ಡೀಲ್ ಕುದುರಿಸಿದ ಆರೋಪದಲ್ಲಿ ಎಸ್ ಐ ಸೌಮ್ಯ , ಮುಖ್ಯ ಪೇದೆ ಜೆ ಪಿ ರೆಡ್ಡಿ ಹಾಗೂ ಕುಮಾರ್ ಎಸಿಬಿ ಪೋಷಕರು ಬಂಧಿಸಿದ್ದಾರೆ.

ಎಸಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

Share This Article
Leave a comment