February 22, 2026

Newsnap Kannada

The World at your finger tips!

acb 1

ಹುಬ್ಬಳ್ಳಿಯಲ್ಲಿ E E ಪಾಲಿಗೆ ಮಂಗಳವಾರ ಅಮಂಗಳ : ಎಸಿಬಿ ಬಲೆಗೆ ಬಿದ್ದ ತಿಮಿಂಗಿಲ !

Spread the love

ಹುಬ್ಬಳ್ಳಿಯ ಅಕ್ಷಯ ಪಾಕ್೯ ಸಮೀಪದ ರಾಜೀವ್ ಗಾಂಧಿ ನಗರದಲ್ಲಿರುವ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಎಂಜಿನಿಯರ್ ದೇವರಾಜ್ ಶಿಗ್ಗಾಂವಿ ನಿವಾಸದ ಮೇಲೆ 10ಕ್ಕೂ ಹೆಚ್ಚಿನ ಎಸಿಬಿ ಅಧಿಕಾರಿಗಳ ತಂಡ ಮಂಗಳವಾರ ಬೆಳಗ್ಗೆ ದಾಳಿ ಮಾಡಿದೆ.

ex hubballi

ಅಧಿಕಾರಿಯ ಪಾಲಿಗೆ ಮಂಗಳವಾರ ಅಮಂಗಳವಾಗಿದೆ. ಮಂಗಳವಾರ ಬೆಳಗ್ಗೆ ಮೂರು ವಾಹನಗಳಲ್ಲಿ ಆಗಮಿಸಿದ ಎಸಿಬಿ ಅಧಿಕಾರಿಗಳು ಮನೆಯನ್ನು ತಲಾಶ್ ಮಾಡುತ್ತಿದ್ದಾರೆ. ಅಕ್ರಮ ಆಸ್ತಿ ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಎಸಿಬಿ ದಾಳಿ ಆರಂಭವಾದಾಗಿಂದ ಮನೆಯ ಯಾವುದೇ ಸದಸ್ಯರನ್ನು ಹೊರಗೆ ಬಿಟ್ಟಿಲ್ಲ. ಅಷ್ಟೇ ಅಲ್ಲ, ಹಲವು ದಾಖಲಾತಿಗಳನ್ನು ಕೇಳಿ ಪಡೆಯುವ ಪ್ರಯತ್ನವನ್ನ ಅಧಿಕಾರಿಗಳು ಮಾಡುತ್ತಿದ್ದಾರೆಂದು ಹೇಳಲಾಗಿದೆ

ಎಕ್ಸಿಕ್ಯೂಟಿವ್ ಎಂಜಿನಿಯರ್ ದೇವರಾಜ ಶಿಗ್ಗಾಂವಿ ಮನೆ ಹುಬ್ಬಳ್ಳಿಯಲ್ಲಿದೆ. ಕೆಲವು ವರ್ಷಗಳ ಹಿಂದೆ ದೇವರಾಜ, ಧಾರವಾಡದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ಈಗ ನೀರಾವರಿ ಇಲಾಖೆಯ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ರಾಜೀವ್ ಗಾಂಧಿ ನಗರದಲ್ಲಿರುವ ಈಗಿನ ಮನೆಯನ್ನು 1 ಕೋಟಿ 53 ಲಕ್ಷಕ್ಕೆ ಖರೀದಿ ಮಾಡಿದ್ದರೆಂದು ಗೊತ್ತಾಗಿದೆ. ಈ ಕುರಿತಂತೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

error: Content is protected !!