February 22, 2026

Newsnap Kannada

The World at your finger tips!

jaggesh1

ಕುತ್ತಿಗೆಯಲ್ಲಿ ನಿಜವಾದ ಹಾವು‌ – ನಟ ಜಗ್ಗೇಶ್ ಹಳೇ ದಿನ ನೆನಪಿಸಿಕೊಂಡಾಗ …..

Spread the love

ನಟ ಜಗ್ಗೇಶ್ ಅಭಿನಯದ ಬೇಡ ಕೃಷ್ಣ ರಂಗಿನಾಟ ಸಿನಿಮಾದ ಒಂದು ಸೀನ್ ನಾಗರಪಂಚಮಿಯ ದಿನವಾದ ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಕುರಿತಂತೆ ನಟ ಜಗ್ಗೇಶ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬೇಡ ಕೃಷ್ಣ ರಂಗಿನಾಟ 1994ರಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾವನ್ನು ರಾಜ್ ಕಿಶೋರ್ ನಿರ್ದೇಶನ ಮಾಡಿದ್ದರು. ಜಗ್ಗೇಶ್‍ಗೆ ಜೋಡಿಯಾಗಿ ಪಾಯಲ್ ಮಲ್ಹೋತ್ರ ಮತ್ತು ಸಿಂಧುಜಾ ನಟಿಸಿದ್ದರು. ಈ ಸಿನಿಮಾದಲ್ಲಿ ಜಗ್ಗೇಶ್ ಕತ್ತಿಗೆ ಹಾವನ್ನು ಸುತ್ತಿಕೊಂಡಿರುವ ದೃಶ್ಯ ಬರುತ್ತದೆ. ಈ ವೇಳೆ ಜಗ್ಗೇಶ್ ಕತ್ತಿನಲ್ಲಿ ನಿಜವಾದ ಹಾವೇ ಇತ್ತು‌ ಎಂದು ಹೇಳಿದ್ದಾರೆ.

ಈ ದೃಶ್ಯದ ಶೂಟಿಂಗ್ ಬಗ್ಗೆ ಜಗ್ಗೇಶ್ ವಿವರಣೆ ನೀಡಿ ಅದು ನಿಜಕ್ಕೂ ಅದ್ಭುತ ದೃಶ್ಯ. ಆದರೆ ಅಂದಿನ‌ ದಿನ ಹೃದಯ ಬಾಯಿಗೆ ಬಂದಿತ್ತು. ಕಾರಣ ಆ ಹಾವು ಹಿಡಿದು ಮೂರು ದಿನ ಆಗಿತ್ತು ಅಷ್ಟೇ. ಅಲ್ಲಿ ಆಡಿರುವುದು ಸಂಭಾಷಣೆ ಅಲ್ಲ, ಭಯಕ್ಕೆ ನಿರ್ದೇಶಕನ ಬೈದದ್ದು. ನಂತರ ಡಬ್ಬಿಂಗ್‍ನಲ್ಲಿ ಬೇರೆ ಸಂಭಾಷಣೆ ಹೇಳಿದೆ.

ಚಿತ್ರದ ನಿರ್ದೇಶಕ ನಮ್ಮ ಗುರುಗಳು ರಾಜಕಿಶೋರ್. ಸತ್ತು 17 ವರ್ಷ ಆಯಿತು. ಅವರ ಹಳೆ ನೆನಪು ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

error: Content is protected !!