January 28, 2026

Newsnap Kannada

The World at your finger tips!

night

ಅಮಾನತುಗೊಂಡ ಸಂಸದರಿಂದ‌ ರಾತ್ರಿಪೂರ ಧರಣಿ

Spread the love

ನಿನ್ನೆ ರಾಜ್ಯಸಭೆಯಲ್ಲಿ ಅನುಚಿತ ವರ್ತನೆ ತೋರಿದ ಆರೋಪದ‌ ಮೇಲೆ ೮ ಜನ ಅಮಾನತುಗೊಂಡ ಸಂಸದರು ಸಂಸತ್ ನ ಬಳಿ‌ ರಾತ್ರಿಪೂರ ಧರಣಿ ನಡೆಸಿದರು.

ಪ್ರತಿಭಟನಾ ನಿರತ ಸಂಸದರು ಪ್ರತಿಭಟನೆಯ ವೇಳೆ ಘೋಷಣೆಗಳನ್ನು‌ ಕೂಗುತ್ತ, ಕೃಷಿ ಮಸೂದೆಗಳ ವಿರುದ್ಧ ಫಲಕಗಳನ್ನು ಪ್ರದರ್ಶಿಸುತ್ತ ಧರಣಿ ನಡೆಸಿದರು.

ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ, ಕಾಂಗ್ರೆಸ್ ನಾಯಕ ಮಲಿಕಾರ್ಜುನ್ ಖರ್ಗೆ, ಗುಲಾಂ ನಬೀ ಆಜಾದ್, ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮುಂತಾದವರು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ, ಧರಣಿಗೆ ಬೆಂಬಲ ಸೂಚಿಸಿದರು.

error: Content is protected !!