ಕಾಲೇಜು ಪ್ರವೇಶಕ್ಕಾಗಿ ಹೊರ ರಾಜ್ಯದಿಂದ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ಮಾಡಿ ನಂತರ ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಹೊರ ರಾಜ್ಯದಿಂದ ಕಾಲೇಜು ಒಂದರಲ್ಲಿ ಪ್ರವೇಶಕ್ಕಾಗಿ ಬೆಂಗಳೂರಿಗೆ ಆಗಮಿಸಿ ದ್ದಳು. ಆಕೆಗೆ ಪರಿಚಿತನಿದ್ದ ಗೆಳೆನೊಬ್ಬ ಕಾಲೇಜಿನ ಪ್ರವೇಶ ಪ್ರಕ್ರಿಯೆ ಮುಗಿದ ಮೇಲೆ ಆಕೆಯನ್ನು ಬ್ಯಾಡರಹಳ್ಳಿಯಲ್ಲಿ ರುವ ತನ್ನ ರೂಂಗೆ ಕರೆದುಕೊಂಡು ಹೋಗಿದ್ದಾನೆ.
ಕೆಲವು ಸಮಯದ ನಂತರ ಆಕೆ ವಿರೋಧ ನಡುವೆಯೂ ಆತ ಅತ್ಯಾಚಾರ ಮಾಡಿದ್ದಾನೆ. ವಿಷಯ ಹೊರಗೆ ಬರುತ್ತದೆ ಎಂದು ಭಾವಿಸಿ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ.
ಅಕ್ಕಪಕ್ಕದವರು ಅನುಮಾನಗೊಂಡು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ಆ ಯುವಕನನ್ನು ಬಂಧಿಸಿದ್ದಾರೆ.