February 22, 2026

Newsnap Kannada

The World at your finger tips!

s coll

ಆದಾಯ ತೆರಿಗೆ ಅಧಿಕಾರಿಗಳ ದಂಡು ದಾಳಿ ಮಾಡಿದ್ದು ಎಲ್ಲೆಲ್ಲಿ‌

Spread the love

ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಬಿಜಿಎಸ್​ ವಿದ್ಯಾಸಂಸ್ಥೆಗಳು ಸೇರಿದಂತೆ ರಾಜ್ಯದ ಹಲವು ಮೆಡಿಕಲ್ ಕಾಲೇಜುಗಳ ಮೇಲೆ ಬುಧವಾರ ಬೆಳಿಗ್ಗೆ ಯಿಂದಲೇ ಐಟಿ ದಾಳಿ ನಡೆದಿದೆ.

ವಿಜಯನಗರ ಆದಿಚುಂಚನಗಿರಿ ಮಠಕ್ಕೆ‌ ಆಗಮಿಸಿದ್ದ ಐಟಿ ಅಧಿಕಾರಿಗಳು ಬಿಜಿಎಸ್​ ವಿದ್ಯಾಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ.

ಸಪ್ತಗಿರಿ ಹಾಗೂ ಬಿಜಿಎಸ್​ ಆಸ್ಪತ್ರೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಫೈಲ್​ಗ​ಳನ್ನು ಪರಿಶೀಲಿಸುತ್ತಿದ್ದಾರೆ.

ಕುಂಬಳಗೂಡಿನ ಆದಿ ಚುಂಚನಗಿರಿ ಶಾಖಾ ಮಠಕ್ಕೆ ತೆರಳಿದ್ದ ಅಧಿಕಾರಿಗಳು ಅಲ್ಲಿ ಕೆಲ ಮಾಹಿತಿಗಳನ್ನು ಪಡೆದುಕೊಂಡು ನಂತರ ಕುಂಬಳಗೂಡಿನ ವಿದ್ಯಾಸಂಸ್ಥೆಗೆ ತೆರಳಿದ್ದಾರೆ.

ಅನೇಕ ಸಂಸ್ಥೆ ಗಳಿಂದ ಕೊಟ್ಯಾಂತರ ರೂಪಾಯಿ ತೆರಿಗೆ ವಂಚನೆ ಆರೋಪ ಕೇಳಿಬಂದಿದೆ, ಸಾರ್ವಜನಿಕರಿಂದ ಬಂದ ಹಲವು ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಯಾವ ಸಂಸ್ಥೆ ಗಳ ಮೇಲೆ
ದಾಳಿ ಮಾಡಲಾಗಿದೆ ?

  • ಆಕಾಶ್ ಆಸ್ಪತ್ರೆ ಹಾಗು ಮೆಡಿಕಲ್ ಕಾಲೇಜು ದೇವನಹಳ್ಳಿ ಮಾಲೀಕ ಮುನಿಯಪ್ಪ
    ನಿವಾಸ ಸಹಕಾರ ನಗರ ಹಾಗು ಆಕಾಶ್ ಅಸ್ಪತ್ರೆಯಲ್ಲಿ ದಾಳಿ ನಡೆದಿದೆ.
  • ಸಪ್ತಗಿರಿ ಅಸ್ಪತ್ರೆ ಹಾಗು ಮೆಡಿಕಲ್ ಕಾಲೇಜು
    ಮಾಲೀಕ ದಯಾನಂದ ಮನೆ
    ಮಾರ್ಗೋಸ ರೋಡ್ ಮಲ್ಲೇಶ್ವರಂ ಬೆಂಗಳೂರು
  • ಬಿಜಿಎಸ್ ಅಸ್ಪತ್ರೆ
    ಕೇಂಗೆರಿ ಬಳಿ
  • . ಶ್ರೀ ದೇವಿ ಮೇಡಿಕಲ್ ಕಾಲೇಜು.
    ತುಮಕೂರು
    ಮಾಲೀಕ ಹುಲಿಯಾರ್ ನಾಯಕ್
    ನಿವಾಸ : ಸೋಮೇಶ್ವರದಲ್ಲಿ ಇರುವ ನಿವಾಸ
error: Content is protected !!