ಇಂದು ಮೈ ಎನ್ಇಪಿ ಅಭಿಯಾನಕ್ಕೆ ಚಾಲನೆ

Team Newsnap
1 Min Read
Modi to Hubballi on January 12: Preparations for the rush ಜನವರಿ 12ರಂದು ಹುಬ್ಬಳ್ಳಿಗೆಮೋದಿ: ಭರದ ಸಿದ್ಧತೆ

ನ್ಯೂಸ್ ಸ್ನ್ಯಾಪ್
ಬೆಂಗಳೂರು, ಸೆಪ್ಟೆಂಬರ್ ೧೧
ಶುಕ್ರವಾರ

ಜುಲೈ ೨೯, ೨೦೨೦ರಂದು ಕೇಂದ್ರ ಸಚಿವ ಸಂಪುಟವು ಹೊಸ ಶಿಕ್ಷಣ ನೀತಿ ೨೦೨೦ ಅನ್ನು ಅನುಮೋದಿಸಿದ ನಂತರ ಇಂದು ಸಂಜೆ ೫ ಗಂಟೆಗೆ ಉಪ ಮುಖ್ಯಮಂತ್ರಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ‘ಮೈ ಎನ್ಇಪಿ’ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ತಜ್ಞರ ಪ್ರಕಾರ ಹೊಸ ಶಿಕ್ಷಣ ನೀತಿಯು ಸಮರ್ಪಕ ರೀತಿಯಲ್ಲಿ‌ ಜಾರಿಗೆ ಬರಲು ಕನಿಷ್ಠ ಹತ್ತು ವರ್ಷಗಳಾದರೂ ಬೇಕು. ಈ ಸಂದರ್ಭದಲ್ಲಿ ಹಂತ ಹಂತವಾಗಿ ಪ್ರತಿ ಆಯ್ದ ಶಾಲೆ, ಕಾಲೇಜುಗಳಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಸಚಿವರು ಅಭಿಯಾನವನ್ನು ಪ್ರಾರಂಭಿಸುತ್ತಿದ್ದಾರೆ.

ಸಮಾರಂಭದಲ್ಲಿ ವಿಶ್ವ ವಿದ್ಯಾಲಯ ಅನುದಾನ ಆಯೋಗದ ಸದಸ್ಯರು, ಹೊಸ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯರೂ ಆಗಿದ್ದ ಎಮ್. ಕೆ. ಶ್ರೀಧರ್, ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಶಾ, ಬೆಂಗಳೂರು ವಿಶ್ವ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಆರ್. ವೇಣುಗೋಪಾಲ್ ಮತ್ತಿತರು ಭಾಗವಹಿಸಲಿದ್ದಾರೆ.

df7ed9b8 c7f7 4668 9bf0 88a4c072e8ce

ಇಂದು ಬೆಳಿಗ್ಗೆ ೧೧ ಗಂಟೆಗೆ ಪ್ರಧಾನಿ ಮೋದಿಯವರು ‘೨೧ನೇ ಶತಮಾನದಲ್ಲಿನ ಶಾಲಾ ಶಿಕ್ಷಣ ಹಾಗೂ ಹೊಸ ಶಿಕ್ಷಣ ನೀತಿಯ ಕುರಿತು ಮಾತನಾಡಲಿದ್ದಾರೆ. ಶಿಕ್ಷಣ ಪರ್ವದ ಅಂಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಆಯೋಜಿಸುತ್ತಿರುವ ಎರಡು ದಿನದ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

Share This Article
Leave a comment