ಡಿಸಿ ವೆಂಕಟೇಶ್ ವರ್ಗಾವಣೆ ; ಶ್ರೀಮತಿ ಎಸ್. ಅಶ್ವಥಿ ಮಂಡ್ಯದ ನೂತನ ಜಿಲ್ಲಾಧಿಕಾರಿಯಾಗಿ ನೇಮಕ

Team Newsnap
1 Min Read

ರಾಜ್ಯ ಸರ್ಕಾರ 42 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಡಾ. ಎಂ ವಿ ವೆಂಕಟೇಶ್ ಅವರನ್ನು ವರ್ಗಾವಣೆ ಮಾಡಿದೆ. ಶ್ರೀಮತಿ ಎಸ್ . ಅಶ್ವಿಥಿ ( 2013 ಬ್ಯಾಚ್ ಅಧಿಕಾರಿ) ಅವರು ಮಂಡ್ಯ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ದಾವಣಗೆರೆ ಜಿಪಂ ಸಿಇಒ ಆಗಿದ್ದ ಎಸ್ ಅಶ್ವಥಿ ಕೇರಳದ ಮೂಲದವರು. ದಾವಣಗೆರೆ ಡಿಸಿ ಗೌತಮ್ ಬಗದಿ ಅವರನ್ನು 2019 ಪೆ. 14 ರಂದು ವಿವಾಹ ವಾಗಿದ್ದಾರೆ.

ashwathi1

ವರ್ಗಾವಣೆ ಆಗಿರುವ ಡಾ ವೆಂಕಟೇಶ್ ಅವರನ್ನು ಜಲನಯನ ಅಭಿವೃದ್ಧಿ ಆಯುಕ್ತ ರಾಗಿ ಬೆಂಗಳೂರಿಗೆ ವರ್ಗಾಯಿಸಲಾಗಿದೆ.

ಚಾಮರಾಜನಗರ ಡಿಸಿ ಡಾ. ಎಂ ಆರ್ ರವಿ ಅವರನ್ನು ಬೆಂಗಳೂರಿನ ಸಕಾಲ ಆಯುಕ್ತ ರಾಗಿ ನೇಮಕ ಮಾಡಲಾಗಿದೆ.

ಐಎಎಸ್ ಅಧಿಕಾರಿಗಳ ವರ್ಗಾವಣೆ ವಿವರ:

Share This Article
Leave a comment