ಸಚಿವ ಯೋಗೇಶ್ವರ್ ತವರಿನಲ್ಲೇ ಗ್ರಾಪಂ ಅಧಿಕಾರ ಸೂತ್ರ ಹಿಡಿದ ಜೆಡಿಎಸ್

Team Newsnap
1 Min Read

ಯೋಗೇಶ್ವರ್ ಹುಟ್ಟೂರು ಚಕ್ಕರೆಯಲ್ಲಿಯೇ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ ಪಂಚಾಯತಿ ಅಧಿಕಾರ ಸೂತ್ರ ಹಿಡಿಯುವ ಮೂಲಕ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಭಾರೀ ಮುಖಭಂಗವಾಗಿದೆ.

ಗ್ರಾಮಪಂಚಾಯಿತಿ ಚುನಾವಣೆಯ ಮತದಾನದ ದಿನದಂದು ಸಿ.ಪಿ. ಯೋಗೇಶ್ವರ್ ಸ್ವಗ್ರಾಮ ಚಕ್ಕೆರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ನಾವು 25 ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುತ್ತೇವೆ. ಕುಮಾರಸ್ವಾಮಿಯವರ ಕಾರ್ಯವೈಖರಿ, ಕ್ಷೇತ್ರದ ಜನರ ಬಗ್ಗೆ ಇರುವ ಕಾಳಜಿ ಈಗ ಗೊತ್ತಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

ಆದರ ಚಕ್ಕೆರೆ ಗ್ರಾಮದಲ್ಲಿಯೇ ಯೋಗೇಶ್ವರ್ ಸೋಲುಂಡಿದ್ದಾರೆ. ಚಕ್ಕೆರೆ ಗ್ರಾಮದಲ್ಲಿ 7 ಸ್ಥಾನಗಳ ಪೈಕಿ 5 ರಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಬೆಂಬಲಿತರು 2 ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಇನ್ನು ಚಕ್ಕೆರೆ ಗ್ರಾಮಪಂಚಾಯಿತಿಯಲ್ಲಿ ಒಟ್ಟು 14 ಸ್ಥಾನಗಳ ಪೈಕಿ ಜೆಡಿಎಸ್ 12 ಕಡೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಕೇವಲ 2 ಸ್ಥಾನಪಡೆದು ಹೀನಾಯವಾಗಿ ಸೋತಿದೆ.

ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕ ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ಅಲೆಯ ಎದುರು ಸಿ.ಪಿ.ಯೋಗೇಶ್ವರ್‌ಗೆ ಕ್ಷೇತ್ರದ ಜನರು ಅಷ್ಟಾಗಿ ಒಲವು ತೋರಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಗ್ರಾಮಪಂಚಾಯಿತಿ ಚುನಾವಣೆಗಳು ಪಕ್ಷದ ಚಿಹ್ನೆಯಡಿಯಲ್ಲಿ ನಡೆಯುವುದಿಲ್ಲ ಎಂದಾದರೂ ಸಹ ಪಕ್ಷ ಹಾಗೂ ನಾಯಕರ ಹೆಸರು ಅಲ್ಲಲ್ಲಿ ಕೊಂಚ ಚಾಲ್ತಿಯಲ್ಲಿದ್ದು ಕೆಲಸ ಮಾಡಿದೆ ಎನ್ನುವುದು ಸಹ ವಾಸ್ತವ ಸತ್ಯ.

Share This Article
Leave a comment