ಪೂರ್ಣ ಪ್ರಮಾಣದ ಶಾಲಾ ಶುಲ್ಕ ಪಾವತಿ ಮಾಡುವಂತೆ ಒತ್ತಾಯಿಸಿ ಅಪಮಾನ ಮಾಡಿದ್ದರಿಂದ ವಿದ್ಯಾರ್ಥಿ ಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ಬುಧವಾರ ಜರುಗಿದೆ.
10 ತರಗತಿ ವಿದ್ಯಾರ್ಥಿಯನ್ನು ಪರೀಕ್ಷೆ ಬರೆಯುವಾಗಲೇ ಅರ್ಧಕ್ಕೆ ಎಬ್ಬಿಸಿ ಕಳುಹಿಸಿದ್ದರಿಂದ ಮನನೊಂದ ಈ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಲ
ಬೊಮ್ಮನಹಳ್ಳಿನ ಸೋಮಸುಂದರ ಹಳ್ಳಿಯ ರವೀಂದ್ರ ಭಾರತಿ ಗ್ಲೋಬಲ್ ಸ್ಕೂಲ್ ಯಲ್ಲಿ 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯ ಪೋಷಕರು ಖಾಸಗಿ ಶಾಲೆಗೆ ಇನ್ನೂ 50 ಸಾವಿರ ಬಾಕಿ ಫೀಸ್ ಹಣ ಪಾವತಿ ಮಾಡಬೇಕಾಗಿತ್ತು.
ಆದರೆ ಇನ್ನೂ ಹಣ ಪಾವತಿ ಮಾಡಿರಲಿಲ್ಕ. ಈ ದಿನ ನಡೆದ ಪರೀಕ್ಷೆ ವೇಳೆ ವಿದ್ಯಾರ್ಥಿಯನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಕಳುಹಿಸಿದ್ದರಿಂದ ಮನನೊಂದ ಆತ್ಮಹತ್ಯೆಗೆ ಯತ್ನಿಸಿ ದ್ದಾನೆ. ಪೋಷಕರು ಆತನನ್ನು ಬಚಾವ್ ಮಾಡಿದ್ದಾರೆ.