ಕೇರಳದಲ್ಲಿನ ಫೇಸ್ ಬುಕ್ ಗೆಳೆಯನನ್ನು ಭೇಟಿ ಮಾಡಲು ಹೋದಾಗ 100 ರು ಕೊಟ್ಟು ಖರೀದಿ ಮಾಡಿದ್ದ ಲಾಟರಿ ಮದ್ದೂರಿನ ಯುವಕನಿಗೆ ಕೋಟಿ ರು ಬಹುಮಾನ ಬಂದಿದೆ.
ಮದ್ದೂರಿನ ಸೋಮನಹಳ್ಳಿಯ ಉದ್ಯಮಿಯ ಪುತ್ರ ಸೋಹನ್ ಬಲರಾಮ್ ಕೇರಳದ ಪುಥನಾಥಿ ಎಂಬಲ್ಲಿ ಫೇಸ್ ಬುಕ್ ಗೆಳೆಯನನ್ನು ಭೇಟಿ ಮಾಡಿ ವಾಪಸ್ಸು ಬರುವಾಗ ಗೆಳೆಯರ ಒತ್ತಾಯದ ಮೇರೆಗೆ 100 ಕೊಟ್ಟ ಲಾಟರಿ ಖರೀದಿ ಮಾಡಿದ್ದರು.
ಸೋಹನ್ ಖರೀದಿ ಮಾಡಿದ ಸಂಖ್ಯೆ ಗೆ ಕೋಟಿ ರು ಲಾಟರಿ ಬಂದಿದೆ. ಅದೃಷ್ಟ ಎಂದರೆ ಹೀಗೆ. ಈಗ ಸೋಹನ್ ಕೋಟ್ಯಾಧೀಪತಿಯಾಗಿರುವುದು ಕುಟುಂಬಕ್ಕೆ ಹರ್ಷ ತಂದಿದೆ.