ಎಫ್ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಸಿಬ್ಬಂದಿಯೂ ಸೇರಿದಂತೆ ಇದುವರೆಗೂ 20 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಪಿಎಸ್ ಸಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿರುವ
ಬೀಳಗಿ ತಾಲೂಕಿನ ಬೂದಿಹಾಳ ಗ್ರಾಮದ ರಮೇಶ್ ಹೆರಕಲ್ ಸಿಸಿಬಿ ವಶದಲ್ಲಿರುವ ಸಿಬ್ಬಂದಿ.
ಕೆಪಿಎಸ್ಸಿಯಲ್ಲಿ ಎಸ್.ಡಿ.ಎ ಸಿಬ್ಬಂದಿಯಾಗಿರುವ ರಮೇಶ್ ಹೆರಕಲ್, ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯ ಬಹಿರಂಗವಾದ ಬೆನ್ನಲ್ಲೇ ಚಿಕ್ಕಪಡಸಲಗಿ ಗ್ರಾಮಕ್ಕೆ ತೆರಳಿದ್ದ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಆಧಾರದ ಮೇಲೆ ಚಿಕ್ಕಪಡಸಲಗಿಯಲ್ಲಿ
ರಮೇಶ್ ಜೊತೆಯಲ್ಲಿ ಇನ್ನೂ ಐವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಣಿಜ್ಯ ತೆರಿಗೆ ಅಧಿಕಾರಿ ಚಂದ್ರು ಮೊಬೈಲ್ ವಶ ಪಡಿಸಿಕೊಂಡ ಪೋಲಿಸರು ಪರಿಶೀಲನೆ ಮಾಡಿದ ವೇಳೆಯಲ್ಲಿ ಚಂದ್ರು , ರಮೇಶ್ ನೊಂದಿಗೆ ಹೆಚ್ಚು ಬಾರಿ ಸಂಪರ್ಕ ಮಾಡಿ ಪ್ರಶ್ನೆ ಪತ್ರಿಕೆ ಮಾರಾಟದ ಡೀಲ್ ನಡೆಸಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣ ಹಿಂದೆ ಕೆಪಿಎಸ್ ಸಿ ಯಲ್ಲಿ ಇರುವ ಯಾವ ಅಧಿಕಾರಿ ಗಳು ಭಾಗಿಯಾಗಿದ್ದಾರೆ ಎನ್ನುವುದನ್ನು ಸಿಸಿಬಿ ಪೋಲಿಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.