February 20, 2026

Newsnap Kannada

The World at your finger tips!

kodo chandrashekar

ದೆಹಲಿಯ ರೈತ ಪ್ರತಿಭಟನೆಗೆ ಸಾಥ್ ಬೆಂಗಳೂರಿನಲ್ಲೂ ಜ. 26 ರಂದು ಟ್ರಾಕ್ಟರ್,ಬೈಕ್ ಪರೇಡ್ – ಕೋಡಿಹಳ್ಳಿ

Spread the love

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಜನವರಿ 26 ರ ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ.

ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ರೈತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರದ ರೈತ ಮಸೂದೆಗಳನ್ನು ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ.ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ನಾವು ಬೆಂಬಲಿಸಿ ಪ್ರತಿಭಟನೆ ಪರೇಡ್ ನಡೆಸುವುದಾಗಿ ಹೇಳಿದರು.

10 ಸಾವಿರ ವಾಹನ‌‌ ರಸ್ತೆಗೆ :

ಜ. 26 ರಂದು ರೈತರು ತಮ್ಮ ಟ್ರಾಕ್ಟರ್, ಬೈಕ್ ಸೇರಿದಂತೆ ಇತರ ವಾಹನಗಳನ್ನು ರಸ್ತೆಗೆ ಇಳಿಸುವ ಮೂಲಕ ಬೃಹತ್ ಪೆರೇಡ್ ನಡೆಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತಮ್ಮ ಟ್ರ್ಯಾಕ್ಟರ್ ಸೇರಿದಂತೆ ಸರಕು ವಾಹನಗಳ ಮೂಲಕ ರಾಜಧಾನಿಗೆ ಆಗಮಿಸಲಿದ್ದಾರೆ. 10 ಸಾವಿರಕ್ಕೂ ಹೆಚ್ಚು ವಾಹನಗಳು ನಗರದ ರಸ್ತೆಗೆ ಇಳಿಯಲಿವೆ ಎಂದರು.

ಪರೇಡ್ ಎಲ್ಲಿಂದ ಆರಂಭ ? :

ತುಮಕೂರು ರಸ್ತೆಯ ನೈಸ್ ಜಂಕ್ಷನ್ ನಿಂದ ಪೆರೇಡ್ ಆರಂಭವಾಗಲಿದೆ. ನೈಸ್ ಜಂಕ್ಷನ್, ಗೊರಗುಂಟೆಪಾಳ್ಯ, ಸರ್ಕಲ್‌ ಮಾರಮ್ಮ ದೇವಸ್ಥಾನ ಮುಂಭಾಗ, ಮಲ್ಲೇಶ್ವರಂ, ಆನಂದ್ ರಾವ್ ವೃತ್ತ ಮೂಲಕ ಫ್ರೀಡಂ ಪಾರ್ಕ್​ವರೆಗೆ ರ್ಯಾಲಿ ನಡೆಯಲಿದೆ. ರೈತರು, ಮಹಿಳೆಯರು, ದಲಿತರು, ಕಾರ್ಮಿಕರು,‌ ಜನಪರ ಸಂಘಟನೆಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

error: Content is protected !!