ಬೆಂಗಳೂರಿನ ಮುತ್ತೂಟ್ ಫೈನಾನ್ಸ್ ಕಚೇರಿಯಿಂದ 25 ಕೆ.ಜಿ ಚಿನ್ನ ಮತ್ತು ಹಣವನ್ನು ದರೋಡೆಕೋರರು ಕದ್ದೊಯ್ದ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ವರದಿಯಾಗಿದೆ.
ದರೋಡೆಕೋರರು ಹೊತ್ತೊಯ್ದಿದ್ದ ಚಿನ್ನಾಭರಣದ ಬಾಕ್ಸ್ಗಳುಈಗ ರಾಜ್ಯದ ಗಡಿಯಲ್ಲಿ ಪತ್ತೆಯಾಗಿದೆ.
ಅತ್ತಿಬೆಲೆ – ಆನೇಕಲ್ ರಸ್ತೆಯ ಭಕ್ತಿಪುರ ಗೇಟ್ ಬಳಿ ಚಿನ್ನಾಭರಣದ ಬಾಕ್ಸ್ಗಳು ಪತ್ತೆಯಾಗಿದೆ.
ಚಿನ್ನಾಭರಣ ಬಾಕ್ಸ್ಗೆ ಜಿಪಿಎಸ್ ಸಿಸ್ಟಂ ಅಳವಡಿಸಲಾಗಿತ್ತು. ಹೀಗಾಗಿ, ದರೋಡೆ ಬಳಿಕ ಜಿಪಿಎಸ್ ಟ್ರ್ಯಾಕ್ ಮಾಡಿದ್ದ ಪೊಲೀಸರು ಚಿನ್ನಾಭರಣವಿದ್ದ ಬಾಕ್ಸ್ಗಳನ್ನು ಪೊದೆಯೊಂದರಲ್ಲಿ ಪತ್ತೆ ಹಚ್ಚಿದ್ದಾರೆ.
ಖದೀಮರು ರಸ್ತೆ ಪಕ್ಕದ ಪೊದೆಯಲ್ಲಿ ಖಾಲಿ ಬಾಕ್ಸ್ ಎಸೆದು ಪರಾರಿ ಯಾಗಿದ್ದಾರೆ. ಬಾಕ್ಸ್ಗಳ ಜೊತೆ ಚಿನ್ನಾಭರಣದ ಬಿಲ್ಗಳು ಸಹ ಪತ್ತೆಯಾಗಿದೆ.
ಅತ್ತಿಬೆಲೆ ಠಾಣೆ ಪೊಲೀಸರು ಸಹ ಪರಿಶೀಲನೆ ನಡೆಸಿದರು.