ಬೆಂಗಳೂರಿನ ಬೊಮ್ಮಸಂದ್ರ ಬಿಬಿಎಂಪಿ ಕಚೇರಿ ಎಕ್ಸಿಕ್ಯುಟಿವ್ ಎಂಜನೀಯರ್ ಆಂಜನಪ್ಪ ಅವರ ಬೆಂಗಳೂರು ಹಾಗೂ ದಾವಣಗೆರೆ ನಿವಾಸಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಅಪಾರ ಪ್ರಮಾಣದ ನಗದು, ಆಸ್ತಿ ವಶಪಡಿಸಿ ಕೊಂಡಿದ್ದಾರೆ.
ಬೆಂಗಳೂರಿನ ಬೊಮ್ಮಸಂದ್ರ ಕಚೇರಿ ಹಾಗೂ ಜೀವನ್ ಭೀಮಾ ನಗರದ ಬಿಬಿಎಂಪಿ ವಸತಿಗೃಹ , ದಾವಣಗೆರೆ ಯಲ್ಲಿನ ಅಧಿಕಾರಿಯ ಸ್ವಗೃಹ , ಸಂಬಂಧಿಕರ ಮನೆಗಳ ಮೇಲೆ ದಾಳಿ ಮಾಡಲಾಗಿದೆ.
ದಾವಣಗೆರೆ ಯಲ್ಲಿ 9 ಲಕ್ಷ ನಗದು, ಆಸ್ತಿ ಪತ್ರಗಳು , ಇತರೆ ದಾಖಲಾತಿಗಳನ್ನು ಹಾಗೂ ಬೆಂಗಳೂರಿನ ನಿವಾಸದಲ್ಲಿ 3.5 ಲಕ್ಷ ರು ವಶಕ್ಕೆ ಪಡೆಯಲಾಗಿದೆ.
ಮಧ್ಯಾಹ್ನ ದವರೆಗೂ ದಾಳಿ ಮುಂದುವರೆದಿತ್ತು.