- ಶಾಸಕಿಯಿಂದ ಪೊಲೀಸ್ ಕರ್ತವ್ಯ ಕ್ಕೆ ಅಡ್ಡಿ
- ಶಾಸಕಿ ಸೌಮ್ಯ ರೆಡ್ಡಿ ವಿರುದ್ದ ಕೇಸ್
- ಕಿರಿಕ್ ಎಂಎಲ್ಎ ಸೌಮ್ಯ ರೆಡ್ಡಿ ರುದ್ರಾವತಾರ
ಮಹಿಳಾ ಪೋಲಿಸ್ ಪೇದೆ ಮೇಲೆ ಶಾಸಕಿ ಸೌಮ್ಯ ರೆಡ್ಡಿ ಹಲ್ಲೆ ಮಾಡಿದ ಪ್ರಸಂಗ ಬೆಂಗಳೂರಿನಲ್ಲಿ ಬುಧವಾರ ನಡೆದಿದೆ.
ಕಾಂಗ್ರೆಸ್ ನಾಯಕರು, ಕಾರ್ಯ ಕರ್ತ ರೈತರ ಪರವಾಗಿ ಕೃಷಿ ಕಾಯ್ದೆಗಳನ್ನು ಕೈ ಬಿಡುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನಾ ಹೋರಾಟದ ವೇಳೆ ರಾಜಭವನಕ್ಕೆ ದಾಳಿ ಮಾಡಲು ಮುಂದಾದರು.
ಈ ವೇಳೆ ಪೋಲಿಸರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ನಡೆದು ತಳ್ಳಾಟ – ನೂಕಾಟ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದುಕೊಳ್ಳುವ ವೇಳೆ ಬ್ಯಾರಿಕೇಡ್ ತಳ್ಳಿ ಕೊಂಡು ನಾಯಕರು ಮತ್ತೆ ಮುಂದೆ ಹೋದಾಗ ಪೋಲಿಸರು ಲಘು ಲಾಠಿ ಪ್ರಹಾರ ಮಾಡಿದರು.
ಪೋಲಿಸ್ ಕೈಗೆ ಏಟು ಹಾಕಿದ ಶಾಸಕಿ :
ತಳ್ಳಾಟ -ನೂಕಾಟದಿಂದ ಕೋಪಗೊಂಡ ಜಯನಗರ ಶಾಸಕಿ ಸೌಮ್ಯ ರೆಡ್ಡಿ, ತನ್ನ ಮೇಲೆ ಮಹಿಳಾ ಪೋಲಿಸ್ ಒಬ್ಬರು ದೌರ್ಜನ್ಯ ಮಾಡಿದ್ದಾರೆಂದು ವ್ಯಾಗ್ರ ರೂಪ ತಾಳಿದರು. ನಂತರ ಶಾಸಕಿ ಮಹಿಳಾ ಪೋಲಿಸ್ ಕೈಗೆ ಎರಡು ಏಟು ಹಾಕಿದರು. ಆ ಮೇಲೆ ಡಿಕೆಶಿ ಬಳಿ ಬಂದು ದೂರು ಹೇಳಿದರು.
- ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ
- ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡನ್ನು ತಯಾರಿಸಲಾಗುತ್ತಿತ್ತು: ಚಂದ್ರಬಾಬು ನಾಯ್ಡು
- ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ ದಾಖಲು
- ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ಗೆ ವಿಶೇಷ ಚೇತನ ಬಲಿ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ಬಂಧಿತ ಕಾಂಗ್ರೆಸ್ ನಾಯಕರನ್ನು ಮೈಸೂರು ರಸ್ತೆ ಸಿಎಆರ್ ಗ್ರೌಂಡ್ ಗೆ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದರು.