February 22, 2026

Newsnap Kannada

The World at your finger tips!

sumalatha1

ಥಿಯೇಟರ್‌ನಲ್ಲೇ ಸಿನಿಮಾ ರಿಲೀಸ್ ಆಗಬೇಕು: ನಟ ಅಭಿಷೇಕ್ ಅಂಬರೀಶ್

Spread the love

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ನಟನೆಯ “ಬ್ಯಾಡ್ ಮ್ಯಾನರ್ಸ್” ಸಿನಿಮಾದ ಮುಹೂರ್ತ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆರವೇರಿತು.

ಈ ವೇಳೆ ಆನ್‌ಲೈನ್ ಮತ್ತು ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ನಟ ಅಭಿಷೇಕ್, ದರ್ಶನ್ ಅವರು ಹೇಳಿದಂತೆ ಸಿನಿಮಾಗಳು ಥಿಯೇಟರ್‌ನಲ್ಲೇ ರಿಲೀಸ್ ಆಗಲಿ ಎಂದರು.

sumalatha2

ದೊಡ್ಡವರು ಹೇಳಿದ್ದಾರೆ ಎಂದ ಮೇಲೆ ಎಲ್ಲಾ ಆಯಾಮದಲ್ಲೂ ಯೋಚಿಸಿಯೇ ಹೇಳಿರುತ್ತಾರೆ ಎಂದರು.

ಯಾವ ನಟನೂ ನಿರ್ಮಾಪಕರಿಗೆ ನಷ್ಟ ಆಗಲಿ ಅಂತ ಬಯಸುವುದಿಲ್ಲ. ದರ್ಶನ್ ಅವರು ತೊಂದರೆ ಮಾಡಿದರು ಎಂದು ಯಾವ ನಿರ್ಮಾಪಕರು ದೂರು ಹೇಳಿಲ್ಲ. ಸಿನಿಮಾಗಳ ಥಿಯೇಟರ್ ನಲ್ಲಿ ರಿಲೀಸ್ ಆಗುವುದರಿಂದ ಯಾವುದೇ ನಷ್ಟ ಆಗಲ್ಲ. ಶೇ. 25ರಷ್ಟು ಸಿನಿಪ್ರಿಯರು ಥಿಯೇಟರ್‌ಗೆ ಬಂದರೂ ಸಾಕು ‌ಎಂಬ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು.

error: Content is protected !!