ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಮತ್ತೊಂದು ಕೊಡುಗೆ ಸಿಗಲಿದೆ.
ಬೆಂಗಳೂರಿನಲ್ಲಿ ಟೆಸ್ಲಾ ಕಂಪನಿ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕವನ್ನು ಆರಂಭಿಸಲಿದೆ.
ಭಾರತದಲ್ಲೇ ಇದೇ ಮೊದಲ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕವನ್ನು ಬೆಂಗಳೂರಿನಲ್ಲಿ ಆರಂಬಿಸಲು ನಿರ್ಧಾರ ಮಾಡಿರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸ್ವಾಗತಿಸಿದ್ದಾರೆ.
ಎಲೆಕ್ಟ್ರಿಕ್ ಉತ್ಪಾದನೆಯ ಜೊತೆಯಲ್ಲಿ ಕಾರು ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗವನ್ನು ಕೂಡ ಆರಂಭಿಸಲು ಟೆಸ್ಲಾ ನಿರ್ಧರಿಸಿದೆ.
ಟೆಸ್ಲಾ ಕಂಪನಿಯ ಸಿಇಓ ಇಲಾನ್ ಮಾಸ್ಕ್ ಪ್ರಪಂಚದ ಮೊದಲ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಅಲಂಕರಿಸಿದ ಬೆನ್ನಲ್ಲೇ ಈ ಘಟಕವು ಬೆಂಗಳೂರಿನಲ್ಲಿ ಸ್ಥಾಪನೆ ನಿರ್ಧಾರ ಮಾಡಲಾಗಿದೆ.